Advertisement

ಸರ್ವರಿಗೂ ನ್ಯಾಯ ಕಲ್ಪಿಸಲು ಕಾಂಗ್ರೆಸ್‌ ಬೆಂಬಲಿಸಿ

05:37 PM May 10, 2018 | Team Udayavani |

ಮಾಗಡಿ: ಕ್ಷೇತ್ರದಲ್ಲಿ ಸರ್ವ ಧರ್ಮಿಯರಿಗೂ ಸಾಮಾಜಿಕ ನ್ಯಾಯಕಲ್ಪಿಸಿ ಕೊಡುವಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಯಶಸ್ವಿಯಾಗಿದ್ದಾರೆ ಎಂದು ರಾಧಾ ಎಚ್‌.ಸಿ. ಬಾಲಕೃಷ್ಣ ಹೇಳಿದರು.

Advertisement

ಪಟ್ಟಣದ ಕಲ್ಯಾಗೇಟ್‌ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ .ಸಿ.ಬಾಲಕೃಷ್ಣ ಪರ ಪಟ್ಟಣದ 17ನೇ ವಾರ್ಡ್‌ನಲ್ಲಿ ಮತಯಾಚಿಸಿ ಮಾತನಾಡಿ, ನನ್ನ ಪತಿ ಎಚ್‌.ಸಿ.ಬಾಲಕೃಷ್ಣ ದಿನದ 24 ಗಂಟೆಗಳ ಕಾಲ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು.

ನಮ್ಮ ಕುಟುಂಬದ ಯಾವುದೇ ಕಾರ್ಯಕ್ರಮಗಳಿದ್ದರೂ ಭಾಗವಹಿಸದೆ ಕಾರ್ಯಕರ್ತರ, ಮುಖಂಡರ ಕಾರ್ಯಕ್ರಮಗಳಿಗೆ ಭಾಗಿಯಾಗಿ ತಾಲೂಕಿನ ಜನತೆಯೇ ನನ್ನ ಬಂಧು, ಬಳಗ ಎಂದು ತಿಳಿದಿದ್ದಾರೆ. ನಮ್ಮ ಮಾವ ದಿ.ಚನ್ನಪ್ಪ ಅವರ ಧ್ಯೇಯವನ್ನೇ ಪತಿ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಡವರ, ದೀನದಲಿತರ,
ಅಲ್ಪಸಂಖ್ಯಾತರ ಪರ ದುಡಿದಿದ್ದಾರೆ ಎಂದು ತಿಳಿಸಿದರು. ಕೆಲ ವಿರೋಧ ಪಕ್ಷದ ಮುಖಂಡರು ನಮ್ಮ ಕುಟುಂಬ 7 ಬಾರಿ ಶಾಸಕರಾಗಿರುವುದನ್ನೇ ಮುಂದಿಟ್ಟುಕೊಂಡು ಆರೋಪ ಮಾಡುವುದು ಆರೋಗ್ಯಕರ ರಾಜಕಾರಣವಲ್ಲ, ಯಾರೋ ರಾಜಕಾರಣಿಗಳಾಗಲಿ ಮಾಡಿರುವ ಜನಪರ ಅಭಿವೃದ್ಧಿ ಬಗ್ಗೆ ಜನರ ಮುಂದಿಟ್ಟು ಮತಯಾಚಿಸಲಿ ಅದನ್ನು ಬಿಟ್ಟು ಕೀಳು ಮಟ್ಟದ ರಾಜಕಾರಣ ಮಾಡುವುದು ನಾಡಪ್ರಭು ಕೆಂಪೇಗೌಡರಿಗೆ ಆಗೌರವತಂದಂತಾಗುತ್ತದೆ ಎಂದು ಜೆಡಿಎಸ್‌ ಅಭ್ಯರ್ಥಿ ಎ.ಮಂಜು ವಿರುದ್ಧ ಆರೋಪಿಸಿದರು.

ತಾಲೂಕು ಟಿಎಪಿಸಿಎಂಎಸ್‌ ಮಾಜಿ ಉಪಾಧ್ಯಕ್ಷ ಮಂಜುನಾಥ್‌ ಮಾತನಾಡಿ, ಎಚ್‌ .ಸಿ.ಬಾಲಕೃಷ್ಣ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸವನ್ನು ಮತದಾರರ ಬಳಿ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಕೆಲವರು ಅಧಿಕಾರ ಇದ್ದಾಗ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅವರ ಕೊಡುಗೆ ತಾಲೂಕಿನಲ್ಲೆ ಏನು ಎಂದು ಮತದಾರರಲ್ಲಿ ಹೇಳಲಿ ಅದನ್ನು ಬಿಟ್ಟು ಎಚ್‌ .ಸಿ.ಬಾಲಕೃಷ್ಣ ಅವರ ವಿರುದ್ಧ ಸುಖಾ ಸುಮ್ಮನೆ ಪ್ರಚಾರಕ್ಕೆ ಆರೋಪಿಸುವುದು ಒಳಿತಲ್ಲ ಎಂದು ವಾಗ್ಧಾಳಿ ನಡೆಸಿದರು.

ಪ್ರಚಾರಕ್ಕೆ ಭಾಗವಹಿಸುವ ಮುನ್ನಾ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಹೂವಿನ ಹಾರ ಎರಚುವ ಮೂಲಕ ನೂರಾರು ಮಂದಿ ಅದ್ಧೂರಿಯಾಗಿ ಬರಮಾಡಿ ಕೊಂಡರು. ತಾಪಂ ಮಾಜಿ ಅಧ್ಯಕ್ಷ ಕಾಂತರಾಜು, ಭೋಜರಾಜು, ವಕೀಲ ಮಂಜುನಾಥ್‌, ದೇವರಾಜಮ್ಮ, ರಮಾಮಣಿ, ಮಂಜುಳಾ, ಗಾಯಿತ್ರಿ, ಸುಗುಣ, ವೀಣಾ, ಸುಧಾ ಅಶ್ಚಿತ್‌, ರೇಖಾ ಶ್ರೀನಿವಾಸ್‌, ಚೇತನ ದೀಪಕ್‌, ನೇಕಾರರ ಸಂಘದ ಅಧ್ಯಕ್ಷ ರಾಘವೇಂದ್ರ, ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ್‌ ಶೇಖರ್‌, ನರಸಿಂಹಮೂರ್ತಿ ಡಿಂಗ್ರಿ, ಕೆ.ಟಿ.ಆರ್‌ ಮೋಹನ್‌, ನವೀನ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next