Advertisement

ಕಾಂಗ್ರೆಸ್‌ ಕಿತ್ತೂಗೆಯಲು ಸಹಕಾರ ನೀಡಿ

01:57 PM May 03, 2018 | Team Udayavani |

ಕೊಳ್ಳೇಗಾಲ: ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎನ್‌.ನಂಜುಂಡಸ್ವಾಮಿ ಪರ ರಾಜ್ಯ ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಭೀಮನಗರದಲ್ಲಿ ಪಾದಯಾತ್ರೆ ಮಾಡಿ ಮತಯಾಚಿಸಿದರು.

Advertisement

ಭೀಮನಗರ ಹುಚ್ಚಲಾಮ್ಮನ ಗುಡಿ ಬೀದಿಯಲ್ಲಿ ಪಾದಯಾತ್ರೆಯ ನಡೆಸಿ ಮನೆಮನೆಗೆ ಕರಪತ್ರ ಹಂಚಿ ಬಿಜೆಪಿ ಅಭ್ಯರ್ಥಿ ಜಿ.ಎನ್‌.ನಂಜುಂಡಸ್ವಾಮಿಗೆ ಮತ ನೀಡಿ ಜಯಗಳಿಸಿ ಕೊಡುವಂತೆ ಮನವಿ ಮಾಡಿದರು. 

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮತ್ತೂಂದು ಅವಧಿಗೆ ಮುಖ್ಯಮಂತ್ರಿ ಮಾಡಲು ವಿವಿಧ ಹಿಂದುಳಿದ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ಸಲುವಾಗಿ ಮತ ನೀಡಬೇಕು ಎಂದರು. 

ಭ್ರಷ್ಟ ಕಾಂಗ್ರೆಸ್‌ ಕಿತ್ತೂಗೆಯಬೇಕು ಮತ್ತು ಅಧಿಕಾರಕ್ಕೆ ಬರುವ ಮುನ್ನ ಮತದಾರರಿಗೆ ನೀಡಿದ್ದ ಭರವಸೆಯನ್ನು ಇಡೇರಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದು ಆರೋಪಿಸಿದರು. 

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು ಅಲೆಯು ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲೂ ಇದ್ದು ಬಿಜೆಪಿ ಅಭ್ಯರ್ಥಿ ಅಪಾರ ಮತಗಳಿಂದ ಜಯಗಳಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Advertisement

ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಯನ್ನು ಹರಿತು ದಲಿತರು ಮತ್ತು ಹಿಂದುಳಿದ ಸಮಾಜದವರು ಮತದಾರರು ಮುಂದೆ ಬಂದಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಬಿಜೆಪಿ ಅಭ್ಯರ್ಥಿ ಜಿ.ಎನ್‌.ನಂಜುಂಡಸ್ವಾಮಿ ಅವರ ಪುತ್ರ ಲೋಕೇಶ್‌ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಎಸ್‌. ವೀರಯ್ಯರವರ ಪಾದಯಾತ್ರೆಯಲ್ಲಿ ಸಾಥ್‌ ನೀಡಿ ತಂದೆಯ ಪರ ಮತಯಾಚನೆ ಮಾಡಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಾಂಬಳ್ಳಿ ನಂಜುಂಡಸ್ವಾಮಿ, ಮುಖಂಡರಾದ ರಾಜಶೇಖರ್‌, ಸಿದ್ದರಾಜು, ಪ್ರಜ್ವಲ್‌, ಬೂದಿತಿಟ್ಟು ಶಿವಕುಮಾರ್‌, ಚಿಕ್ಕುಚ್ಚ, ಮದ್ದೂರು ವೀರೂಪಾಕ್ಷ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next