Advertisement
ಡಿ.13ರಂದು 20 ಕಾರ್ಮಿಕರು ಕಲ್ಲಿದ್ದಲು ಗಣಿಗೆ ಪ್ರವೇಶಿಸಿದ್ದರು. ತಳ ಭಾಗ ಪ್ರವೇಶಿಸಿದ ಬಳಿಕ ಅವರು ಅಡ್ಡಲಾಗಿ ಕೊರೆದಿದ್ದ ಸುರಂಗಕ್ಕೆ ತೆರಳಿದ್ದರು. ಸ್ಥಳೀಯವಾಗಿ ಅದನ್ನು “ರಾಟ್ ಹೋಲ್’ ಎಂದು ಕರೆಯುತ್ತಾರೆ. ಈ ಗಣಿಯ ಸಮೀಪದಲ್ಲಿಯೇ ಇರುವ ಲಿಟೆನ್ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಗಣಿಗೆ ನೀರು ನುಗ್ಗಿ, 15 ಮಂದಿ ಸಿಕ್ಕಿ ಹಾಕಿಕೊಂಡಿದ್ದರು. ಉಳಿದ ಐದು ಮಂದಿ ಮೇಲಕ್ಕೇರಿ ಬರುವಲ್ಲಿ ಯಶಸ್ವಿಯಾಗಿದ್ದರು.
ಗಣಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕ್ರಮಕೈಗೊಳ್ಳುವ ಬದಲು ಪ್ರಧಾನಿ ಮೋದಿ ಬೊಗಿಬೀಲ್ ಸೇತುವೆ ಉದ್ಘಾಟನೆ ನೆಪದಲ್ಲಿ ಫೋಟೊಧೀಗಳಿಗೆ ಪೋಸ್ ಕೊಡುತ್ತಿ ದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬುಧವಾರ ಟ್ವೀಟ್ ಮಾಡಿರುವ ಅವರು, ಕಾರ್ಮಿಕರ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾಗಿರುವ ಹೈಪ್ರಶರ್ ಪಂಪ್ಗ್ಳನ್ನು ನೀಡಲು ಕ್ರಮ ಕೈಗೊಳ್ಳಲಿ ಎಂದೂ ಟ್ವೀಟ್ ಮಾಡಿದ್ದಾರೆ.