Advertisement

ಶಶಿಗೆ ಕುಟುಕಿದ “ಚೇಳು’ಹೇಳಿಕೆ

06:00 AM Nov 04, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು “ಚೇಳು’ ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕ ದ್ದಮೆಯೊಂದು ದಿಲ್ಲಿಯ ಹೆಚ್ಚು ವರಿ ಮೆಟ್ರೋಪಾಲಿಟನ್‌ ನ್ಯಾಯಾಲಯದಲ್ಲಿ ದಾಖಲಾಗಿದೆ. ದೆಹಲಿಯ ಬಿಜೆಪಿ ನಾಯಕ ರಾಜೀವ್‌ ಬಬ್ಬರ್‌ ಎಂಬುವರು ಈ ದೂರು ದಾಖಲಿಸಿದ್ದಾರೆ. ಅ. 28ರಂದು ಬೆಂಗಳೂರು ಸಾಹಿತ್ಯ ಹಬ್ಬದ ಸಮಾ ರಂಭದಲ್ಲಿ ಮಾತನಾಡಿದ್ದ ಶಶಿ ತರೂರ್‌, ಆರ್‌ಎಸ್‌ಎಸ್‌ ವ್ಯಕ್ತಿಯೊಬ್ಬರು ಮೋದಿಯವರನ್ನು “ಶಿವಲಿಂಗದ ಮೇಲಿರುವ ಚೇಳು’ ಎಂದು ಬಣ್ಣಿಸಿದ್ದಾಗಿ ತಿಳಿಸಿದ್ದರು. ಇದನ್ನು, ತಮ್ಮ ದೂರಿನಲ್ಲಿ ಉಲ್ಲೇಖೀಸಿರುವ ಬಬ್ಬರ್‌, “ಜನರೆದುರು ಮೋದಿ ಯವರ ಮಾನ ಕಳೆಯಲೆಂದೇ ಇಂಥ ಹೇಳಿಕೆ ಯನ್ನು ತರೂರ್‌ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ. ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್‌, ಇದೊಂದು ನಿಷ್ಪ್ರಯೋಜಕ ದೂರಾಗಿದ್ದು, ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದುರುದ್ದೇಶ ಹೊಂದಿದೆ ಎಂದಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next