Advertisement

ಬಯಸದೇ ಬಂದ ಭಾಗ್ಯ

11:40 AM Dec 01, 2017 | |

“ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಗೋವಿಂದೇ ಗೌಡ ಅವರು “ಜಂತರ್‌ ಮಂತರ್‌’ ಎಂಬ ಸಿನಿಮಾ ಮಾಡುವ ವಿಷಯ ನಿಮಗೆ ಗೊತ್ತಿರಬಹುದು. ಈಗ ಆ ಸಿನಿಮಾದ ಚಿತ್ರೀಕರಣ ಮುಗಿದು ಬಿಡುಗಡೆಗೆ ರೆಡಿಯಾಗಿದೆ.  ಈ ಚಿತ್ರದ ವಿಶೇಷವೆಂದರೆ ಕಾಮಿಡಿ ಕಿಲಾಡಿ ಶೋನಲ್ಲಿದ್ದ ಬಹುತೇಕ ಮಂದಿ ಇದರಲ್ಲಿ ಕಾಣಿಸಿಕೊಂಡಿದ್ದಾರಂತೆ.

Advertisement

ಇದು ಹೆಸರಿಗೆ ತಕ್ಕಂತೆ ಕಾಮಿಡಿ ಸಿನಿಮಾ. ಇಡೀ ಸಿನಿಮಾದಲ್ಲಿ ಪ್ರೇಕ್ಷಕರು ನಗುತ್ತಾರೆಂಬುದು ಗೋವಿಂದೇಗೌಡರ ಮಾತು. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಜೀವನದಲ್ಲಿ ಏನೂ ಸಾಧನೆ ಮಾಡದೇ ಇರುವ ವ್ಯಕ್ತಿಗೆ ಏಕಾಏಕಿ ಸುಯೋಗ ಬಂದರೆ ಅದು ಜಂತರ್‌ ಮಂತರ್‌. ಆ ತರಹದ ಸಂದರ್ಭದೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. 

ಬಯಸದೇ ಬಂದ ಭಾಗ್ಯ ಎಂಬ ಕಾನ್ಸೆಪ್ಟ್ನಡಿ ಸಾಗುವ ಸಿನಿಮಾದಲ್ಲಿ ಮನರಂಜನೆಗೆ ಒತ್ತುಕೊಡಲಾಗಿದೆಯಂತೆ. ಚಿತ್ರವನ್ನು ಶಿವಸುಂದರ್‌ ಎಲ್‌ ಮತ್ತು ಬಿ. ನಾಗರಾಜ್‌ ಸಾಲುಂಡಿ ನಿರ್ಮಿಸಿದ್ದಾರೆ. ಇವರ ಜೊತೆ ಮಹೇಶ್‌, ರಾಜು, ಅನಂತ್‌ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್‌, ಹಿತೇಶ್‌ ನಾಯಕರಾಗಿದ್ದರೆ, ಸಂಭ್ರಮ ನಾಯಕಿ. ಇವರೊಂದಿಗೆ ದಿವ್ಯಾಶ್ರೀ, ಮಂಜು ಬಸಯ್ಯ, ಶೋಭರಾಜ್‌, ವಿ. ಮನೋಹರ್‌ ನಟಿಸಿ¨ªಾರೆ. ನಿರ್ದೇಶಕ ಗೋವಿಂದೇಗೌಡ ಅವರು ಮೂರು ವರ್ಷಗಳ ಹಿಂದೆಯೇ ಈ ಕಥೆ ಬರೆದಿದ್ದರಂತೆ. “ಕಾಮಿಡಿ ಕಿಲಾಡಿಗಳು’ ಸಮಯದಲ್ಲಿ ಸ್ನೇಹಿತರಿಗೆ ಈ ಕಥೆಯನ್ನು ಹೇಳಿದ್ದರಂತೆ. ಕಥೆ ಇಷ್ಟವಾಗಿ ಅವರೆಲ್ಲಾ ಜೊತೆಯಾದರೂ ಎಂಬುದು ಗೋವಿಂದೇಗೌಡರ ಮಾತು. ಚಿತ್ರದ ರೆಟ್ರೋ ಹಾಡೊಂದನ್ನು ಜಗ್ಗೇಶ್‌ ಹಾಡಿದ್ದು, ಆನಂದ್‌ ಹಾಗೂ ನಯನ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ರಾಕಿ ಸೋನು ಸಂಗೀತವಿದೆ. ಸುರೇಶ್‌ಬಾಬು ಛಾಯಾಗ್ರಹಣ, ಶಿವರಾಜ್‌ ಮೇಹು
ಸಂಕಲನವಿದೆ. ಚಿತ್ರಕ್ಕೆ ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ 35 ದಿನಗಳ ಚಿತ್ರೀಕರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next