Advertisement

ಜಾಲಿರೈಡ್‌ನ‌ಲ್ಲಿ ಸಹೋದ್ಯೋಗಿ ಮಿತ್ರರ ದುರ್ಮರಣ

11:10 AM Jun 24, 2017 | |

ಬೆಂಗಳೂರು: ಹೊಸ ಬೈಕ್‌ ಖರೀದಿಸಿದ ಸಂತಸದಲ್ಲಿ ಸಹೋದ್ಯೋಗಿಗಳಿಬ್ಬರು ಜಾಲಿ ರೈಡ್‌ ಮಾಡುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದು ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರಂನ ಮಹಾಕವಿ ಕುವೆಂಪು ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡಿದಿದೆ.

Advertisement

ಲಗ್ಗೆರೆ ನಿವಾಸಿ ಚಂದನ್‌ (22) ಮತ್ತು ರಾಜಾಜಿನಗರ 1ನೇ ಹಂತದ ನಿವಾಸಿ ವೆಂಕಟಾಚಲ (21) ಮೃತರು. ಚಂದನ್‌ ಮತ್ತು ವೆಂಕಟಾಚಲ ಪ್ಯಾಲೇಸ್‌ ರಸ್ತೆಯ ಯಮಹಾ ಬೈಕ್‌ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ವಾರದ ಹಿಂದಷ್ಟೇ ವೆಂಕಟಾಚಲ ಸಾಲ ಪಡೆದು ಹೊಸ ಯಮಹಾ ಬೈಕ್‌ ಖರೀದಿ ಮಾಡಿದ್ದರು.

ವಾಹನ ಇನ್ನು ನೊಂದಾಣಿಯಾಗಿರಲಿಲ್ಲ. ಗುರುವಾರ ರಾತ್ರಿ ಸುಮಾರು 12.45ರ ಸುಮಾರಿಗೆ ಎಂ.ಡಿ.ಬ್ಲ್ಯಾಕ್‌ನಿಂದ ನವರಂಗ್‌ ಕಡೆ ವೇಗವಾಗಿ ಹೋಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿಯೊಡೆದಿದ್ದಾರೆ. ಪರಿಣಾಮ ಇಬ್ಬರ ತಲೆಗೆ ಗಂಭೀರವಾಗಿ ಪೆಟ್ಟು ಬಿದಿದೆ. ಸ್ಥಳದಲ್ಲಿದ್ದ ಸಂಚಾರ ಠಾಣೆ ಪೊಲೀಸರು ಕೂಡಲೇ ಆ್ಯಂಬುಲೆನ್ಸ್‌ ಮೂಲಕ ಇಬ್ಬರನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.

ಹೆಲ್ಮೆಟ್‌ ಧರಿಸಿರಲಿಲ್ಲ: ಬೈಕ್‌ ಚಾಲನೆ ಮಾಡುತ್ತಿದ್ದ ವೆಂಕಟಾಚಲ ಮತ್ತು ಹಿಂಬದಿ ಸವಾರ ಚಂದನ್‌ ಇಬ್ಬರು ಹೆಲ್ಮೆಟ್‌ ಧರಿಸಿರಿಲಿಲ್ಲ. ಹೀಗಾಗಿ ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಲ್ಲೇಶರಂ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next