Advertisement

ನಾಳೆಯಿಂದ ಸಮ್ಮಿಶ್ರ  ಸರ್ಕಾರದ ಚೊಚ್ಚಲ ಅಧಿವೇಶನ

06:00 AM Jul 01, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ, ಅತೃಪ್ತಿ, ಅನುಮಾನಗಳ ನಡುವೆಯೇ ಸಮ್ಮಿಶ್ರ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ.

Advertisement

ಹೊಸದಾಗಿ ಬಜೆಟ್‌ ಬೇಕು-ಬೇಡವೆಂಬ ವಾದಗಳ ನಡುವೆಯೇ ಜುಲೈ 5 ರಂದು ಪರಿಷ್ಕೃತ ಬಜೆಟ್‌ ಸಹ ಮಂಡನೆಯಾಗಲಿದ್ದು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನನಿತ್ಯ ಪ್ರಸ್ತಾಪವಾಗುತ್ತಿರುವ ಸಾಲಮನ್ನಾ ವಿಚಾರದಲ್ಲಿ ರಾಜ್ಯದ ರೈತರು ಸಹ ಬಜೆಟ್‌ನತ್ತ ಚಿತ್ತ ಹರಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಮೊದಲ ದಿನದಿಂದಲೂ ವಿರೋಧಿಸುತ್ತಲೇ ಬಂದಿರುವ ಪ್ರತಿಪಕ್ಷ ಬಿಜೆಪಿ ಅಪವಿತ್ರ ಮೈತಿಧಿಕ್ಕರಿಸಿ ಎಂದು ಕರೆ ನೀಡಿದ್ದು, ಮತ್ತು ಹೊರಗೆ ಹೋರಾಟಕ್ಕೆ ಉಭಯ ಸದನಗಳಲ್ಲೂ ಸರ್ಕಾರದ ವಿರುದಟಛಿ ಮುಗಿ ಬೀಳಲು ಸಜ್ಜಾಗಿದೆ.

ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎಲ್ಲ ರೀತಿಯ ಸಾಲ ಮನ್ನಾ ಮಾಡುವ
ಭರವಸೆ ಈಡೇರಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದ್ದು, ಅದರಲ್ಲಿ ವ್ಯತ್ಯಾಸವಾದರೆ ಸರ್ಕಾರದ ವಿರುದಟಛಿ
ಸಂಘರ್ಷಕ್ಕೆ ಇಳಿಯುವುದಂತೂ ಖಚಿತ. ಈಗಾಗಲೇ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಆ ನಿಟ್ಟಿನಲ್ಲಿ ಎಚ್ಚರಿಕೆ ಸಹ ನೀಡಿದ್ದಾರೆ.

ಜತೆಗೆ, ಮಹಿಳೆಯರು, ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಮಾಸಾಶನ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಬಿಜೆಪಿ ಪಟ್ಟು ಹಿಡಿಯಲಿದೆ. ಹೀಗಾಗಿ, ಬಜೆಟ್‌ನಲ್ಲಿ ಭರವಸೆಗಳ ಈಡೇರಿಕೆಗೆ ಯಾವ ರೀತಿಯ “ಮ್ಯಾಜಿಕ್‌’ ನಡೆಯಲಿದೆ ಎಂಬ ಕುತೂಹಲವೂ ಇದೆ.

Advertisement

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌-79, ಜೆಡಿಎಸ್‌-37 ಹಾಗೂ ಇಬ್ಬರು ಪಕ್ಷೇತರರ ಸಹಾಯಹಸ್ತದಿಂದ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 119 ಇರಬಹುದು. ಆದರೆ, 104 ಸಂಖ್ಯಾಬಲ ಹೊಂದಿರುವ ಬಿಜೆಪಿ ಪ್ರಬಲ ಪ್ರತಿಪಕ್ಷವೇ. ಅತ್ತ ಪರಿಷತ್‌ನಲ್ಲೂ ಸರ್ಕಾರ ಬಿಜೆಪಿಯನ್ನು ಎದುರಿಸಬೇಕು.

ಹಣಕಾಸು ವಿಧೇಯಕ ಸೇರಿ ಪ್ರಮುಖ ವಿಧೇಯಕಗಳ ಮಂಡನೆ, ಚರ್ಚೆ, ಅಂಗೀಕಾರ ಸಂದರ್ಭದಲ್ಲಿ ಎರಡೂ ಪಕ್ಷಗಳು ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಜುಗರಕ್ಕೆ ಒಳಗಾಗುವುದು ಖಚಿತ. ಕಾಂಗ್ರೆಸ್‌ ಹಾಗೂ
ಜೆಡಿಎಸ್‌ನ 15 ಶಾಸಕರು ಸದನದಲ್ಲಿ ಇಲ್ಲದಿದ್ದರೂ ಪ್ರಮುಖ ವಿಧೇಯಕಗಳ ಅಂಗೀಕಾರ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಬಹುದು. ಹೀಗಾಗಿ, ಸದಾ ಎಚ್ಚರವಹಿಸಬೇಕಾದ ಅನಿವಾರ್ಯತೆಯಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಪ್ರವಾಹವುಂಟಾಗಿ ಬೆಳೆ ನಾಶ ಸೇರಿ ಸಾಕಷ್ಟು ತೊಂದರೆಗಳು ಉಂಟಾಗಿವೆ.ಪ್ರತಿಪಕ್ಷದ ಟೀಕೆ ನಂತರ ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿತು. ಆದರೆ, ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರದ ಪ್ರತಿ ನಡೆಯ ಬಗ್ಗೆಯೂ ಪ್ರತಿಪಕ್ಷ ಬಿಜೆಪಿ ಎಚ್ಚರಿಕೆಯಿಂದ ಗಮನಿಸಿ ಅವಕಾಶ ಸಿಕ್ಕಾಗಲೆಲ್ಲಾ “ಸಮರ’ ಸಾರುವುದು ಖಚಿತ.

ಈಗಾಗಲೇ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸರ್ಕಾರದಲ್ಲಿ ಕಮೀಷನ್‌ ದಂಧೆ ನಡೆಯುತ್ತಿದೆ.ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಕಮೀಷನ್‌ಗೆ ಬೇಡಿಕೆ ಇಡಲಾಗಿದೆ. ಜಲಸಂಪನ್ಮೂಲ ಸಚಿವರು ಇಂತಹ ಬೇಡಿಕೆ ಇಟ್ಟಿದ್ದಾರೆಂದು ಗುತ್ತಿಗೆದಾರರು ಹೇಳಿರುವುದಾಗಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ವಿರುದಟಛಿ ಆರೋಪಿಸಿದ್ದಾರೆ. ಅದಕ್ಕೆ ಶಿವಕುಮಾರ್‌ ತಿರುಗೇಟು ನೀಡಿದ್ದು, ಆ ವಿಚಾರವೂ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. 

ಇನ್ನು, ಅಧಿವೇಶನ ಪ್ರಾರಂಭವಾಗುವುದರ ಒಳಗೆ ಕೆಪಿಸಿಸಿ ಅಧ್ಯಕ್ಷರ ನೇಮಕ, ಸಂಪುಟದಲ್ಲಿ ಖಾಲಿ ಉಳಿದಿರುವ ಸಚಿವ ಸ್ಥಾನ ಭರ್ತಿ, 30 ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗುವುದು ಎಂಬ ಮಾತುಗಳು ಇತ್ತಾದರೂ ಇದೀಗ ಬಜೆಟ್‌ ಹಾಗೂ ಅಧಿವೇಶನ ಮುಗಿದ ನಂತರ ಎಂದು ಹೇಳಲಾಗುತ್ತಿದೆ. ಇದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಜತೆಗೆ ಅಧಿಕಾರಿಗಳ ವರ್ಗಾವಣೆ ವಿಚಾರ ಒಳಗಿಂದೊಳಗೇ ಜಾತಿ ಸಂಘರ್ಷದ ಸ್ವರೂಪ ಪಡೆದಿದೆ. 

ಒಕ್ಕಲಿಗ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕಲ್ಪಿಸಿ, ಕುರುಬ ಸಮುದಾಯದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಹುದ್ದೆ ಸಹ ತೋರಿಸುತ್ತಿಲ್ಲ. ಇದು ಪರೋಕ್ಷವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಸುವ ಕೆಲಸ ಎಂಬ ಕೋಪ ಕುರುಬ ಸಮುದಾಯದಲ್ಲಿದೆ. ಖುದ್ದು ಕಾಗಿನೆಲೆ ಪೀಠದ ಶ್ರೀಗಳು ಈ ಬಗ್ಗೆ ಬಹಿರಂಗ ಸಮರ ಸಾರಿದ್ದಾರೆ. ಈ ಎಲ್ಲ ವಿಚಾರಗಳು ಹತ್ತು ದಿನಗಳ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯೂ ಇದ್ದು ಎಚ್‌.ಡಿ.ಕುಮಾರಸ್ವಾಮಿ ಹೇಗೆ ಎದುರಿಸಲಿದ್ದಾರೆ. ಸಮ್ಮಿಶ್ರ ಸರ್ಕಾರದ ಮೂಲಕ ಒಂದಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಉಭಯ ಸದನಗಳಲ್ಲಿ ಪ್ರತಿ ಪಕ್ಷ ಬಿಜೆಪಿ ವಿರುದಟಛಿವೂ ಒಂದಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ಮುನಿಸು ನಿಜಕ್ಕೂ ತಣ್ಣಗಾಯ್ತಾ?
ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಜೆಟ್‌ ಮಂಡಿಸುವ ಅಗತ್ಯವಿಲ್ಲ ಎಂಬ ಹೇಳಿಕೆಯಿಂದ ಪ್ರಾರಂಭವಾದ ಸಿದ್ದರಾಮಯ್ಯ ಅವರ ಮುನಿಸು ಬಾದಾಮಿ ಪ್ರವಾಸ, ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ, ಕೆಲ ಕಾಲ ಮೌನದವರೆಗೂ ಮುಂದುವರಿದು ಈ ಸರ್ಕಾರ ಎಷ್ಟು ದಿನವೋ ಎಂಬ ಜಿಜ್ಞಾಸೆಯೂ ಕಾರಣವಾಗಿ “ಹೈಕಮಾಂಡ್‌’ ಮಧ್ಯಪ್ರವೇಶದ 
ನಂತರ ತಣ್ಣಗಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಒಳಗೊಳಗೆ ಸಿದ್ದರಾಮಯ್ಯ ಹಾಗೂ ಸಚಿವಾಕಾಂಕ್ಷಿಗಳಲ್ಲಿನ ಅಸಮಾಧಾನ ಒಂದಷ್ಟು ಇದ್ದೇ ಇದೆ. ಇದು ಅಧಿವೇಶನದಲ್ಲಿ ಯಾವ ರೀತಿ ವ್ಯಕ್ತವಾಗುತ್ತದೆ
ಎಂಬುದು ಕುತೂಹಲ ಮೂಡಿಸಿದೆ. ಇದನ್ನೇ ಪ್ರತಿಪಕ್ಷ ಬಿಜೆಪಿ ಸಹ ಎದುರು ನೋಡುತ್ತಿದೆ.

ಹೈಕಮಾಂಡ್‌ ಅಭಯ
ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌,ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಾಥ್‌ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಹೈಕಮಾಂಡ್‌ ಅಭಯವಿದೆ. ಹೀಗಾಗಿ, ಎಷ್ಟೇ ಅಸಮಾಧಾನ ಇದ್ದರೂ ಮೌನ ಬಿಟ್ಟು ಸದ್ಯಕ್ಕೆಬೇರೇನೂ ಮಾಡುವ ಸ್ಥಿತಿಯಲ್ಲೂ ಅತೃಪ್ತರಿಲ್ಲ. ಕಾಲ ಕಾಲಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಲಹೆಯೂ ದೊರೆಯುವುದರಿಂದ ಸಮಸ್ಯೆಯಾಗದು ಎಂಬ ಆಶಾಭಾವ ಕುಮಾರಸ್ವಾಮಿ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next