Advertisement

ಸಂಪುಟ ವಿಸ್ತರಣೆಗೆ ಮುಂದಾದ್ರೆ ಸಮ್ಮಿಶ್ರ ಸರಕಾರ ಪತನ: ಶೆಟ್ಟರ್‌

06:15 AM Oct 04, 2018 | Team Udayavani |

ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಅ.12ರಂದು ಸಚಿವ ಸಂಪುಟ ವಿಸ್ತರಣೆ ಆಗಲ್ಲ. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಗೆ ಮುಂದಾದರೆ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಅತೃಪ್ತರಿಗೆ ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ನೀಡುವುದಿಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಯಾವುದೇ ಕಾರಣಕ್ಕೂ ನಡೆಯಲ್ಲ. 

ಮುಂದಿನ 2-3 ತಿಂಗಳಲ್ಲಿ ಸರಕಾರ ಬೀಳಲಿದೆ ಎಂಬುದು ಕುಮಾರಸ್ವಾಮಿಗೂ ಮನವರಿಕೆಯಾಗಿದೆ. ಹೀಗಾಗಿ, ಬೇಕಾಬಿಟ್ಟಿಯಾಗಿ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದರು.

ರಾಷ್ಟ್ರದ ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬಕ್ಕೆ ಸೇರಿವೆ. ಇದಕ್ಕೆ ಜೆಡಿಎಸ್‌ ಕೂಡ ಹೊರತಾಗಿಲ್ಲ. ಒಂದು ಕುಟುಂಬದ ಅಣತಿಯಂತೆ ಕೆಲಸ ಮಾಡುತ್ತಿದ್ದೇವೆ ಎಂದು ಆ ಪಕ್ಷದ ಕಾರ್ಯಕರ್ತರು, ನಾಯಕರು ಚಿಂತಿಸಬೇಕು. ಕಾಂಗ್ರೆಸ್‌ ಕೂಡ ಒಂದು ಕುಟುಂಬದ ಪಕ್ಷವಾಗಿದೆ. ಬಿಜೆಪಿ ಮಾತ್ರ ಸಾಂ ಕ ಹಾಗೂ ಸಾರ್ವಜನಿಕರಿಂದ ನಡೆಯುತ್ತಿರುವ ಪಕ್ಷ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next