Advertisement

ಹೊಸ ಆಯೋಗಕ್ಕೆ “ನಾಗರಿಕ ಸಂಹಿತೆ’ಹೊಣೆ

12:44 AM Feb 05, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಸಾಧಕ-ಬಾಧಕಗಳನ್ನು ಕೇಂದ್ರ ಸರಕಾರ ರಚಿ ಸಲಿರುವ 22ನೇ ಕಾನೂನು ಆಯೋಗ ಅಧ್ಯಯನ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

Advertisement

ಸಂಸದ ನಿಶಿಕಾಂತ್‌ ದುಬೇ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಮೊದಲು ನಾಗರಿಕ ಸಂಹಿತೆಯ ಸಾಧಕ ಬಾಧಕಗಳ ಅಧ್ಯಯನದ ಪ್ರಸ್ತಾವನೆಯನ್ನು 21ನೇ ಕಾನೂನು ಆಯೋಗದ ಮುಂದಿಡಲಾಗಿತ್ತು. ಆದರೆ ಕಳೆದ ವರ್ಷದ ಆಗಸ್ಟ್‌ನಲ್ಲಿ 21ನೇ ಕಾನೂನು ಆಯೋಗದ ಅಧಿಕಾರಾ ವಧಿ ಮುಕ್ತಾಯವಾಗಿದ್ದರಿಂದ ಈಗ 22ನೇ ಆಯೋಗದ ಮುಂದೆ ಸಂಹಿತೆಯ ಪ್ರಸ್ತಾವನೆ ಮಂಡಿಸಲು ಚಿಂತನೆ ನಡೆಸಲಾಗಿದೆ’ ಎಂದರು.

ಶುಲ್ಕ ನಿಯಂತ್ರಣ ಅಸಾಧ್ಯ: ದೇಶದ ನಾನಾ ನ್ಯಾಯಾ ಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ವಕೀಲರ ಮಿತಿಮೀರಿದ ಶುಲ್ಕಕ್ಕೆ ಕಡಿವಾಣ ಹಾಕುವುದು ಅಸಾಧ್ಯ ಎಂದು ರಿಜಿಜು, ಲೋಕಸಭೆಗೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next