Advertisement
ಲೋಕೇಶ್ ಮತ್ತು ಮಾನಸಾ ದಂಪತಿ ಪುತ್ರ ದೀಕ್ಷಿತ್(2) ಮೃತ ಬಾಲಕ. ದೀಕ್ಷಿತ್ಗೆ ಮಂಗಳವಾರ ಸಂಜೆ 7ರ ಸಮಯದಲ್ಲಿ ಶೀತ, ಕೆಮ್ಮು ಬಂದಿದೆ. ತಾಯಿ ಮಾನಸಾ ಮನೆಯಲ್ಲಿ ಕೆಲವು ದಿನಗಳ ಹಿಂದೆ ತಂದಿಟ್ಟಿದ್ದ ಕೆಮ್ಮಿನ ಔಷಧಿ ಅವಧಿ ಮೀರಿದ್ದನ್ನುಅರಿಯದೇ ಮಗುವಿಗೆ ಕುಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮಗು, ಗಂಟಲು ನೋವೆಂದು ಹೇಳಿ ಅಸ್ವಸ್ಥಗೊಂಡಿದೆ. ಪಟ್ಟಣದ
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. “ಮಗು ಅಸ್ವಸ್ಥಗೊಂಡಿತ್ತು, ವೈದ್ಯರು ತುರ್ತಾಗಿ ಚಿಕಿತ್ಸೆ ನೀಡದ್ದರಿಂದ ಮೃತಪಟ್ಟಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.