Advertisement

ಅವಧಿ ಮೀರಿದ ಔಷಧಿ ಸೇವಿಸಿ ಮಗು ಸಾವು

03:50 AM Mar 02, 2017 | Team Udayavani |

ಕೆ.ಆರ್‌.ಪೇಟೆ (ಮಂಡ್ಯ): ಕೆಮ್ಮಿನ ಉಪಶಮನಕ್ಕೆಂದು ಅವಧಿ ಮೀರಿದ ಔಷಧಿ ಕುಡಿಸಿದ್ದರಿಂದ ಮಗು ಸಾವನ್ನಪ್ಪಿರುವ ಘಟನೆ ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿ ನಡೆದಿದೆ.  

Advertisement

ಲೋಕೇಶ್‌ ಮತ್ತು ಮಾನಸಾ ದಂಪತಿ ಪುತ್ರ ದೀಕ್ಷಿತ್‌(2) ಮೃತ ಬಾಲಕ. ದೀಕ್ಷಿತ್‌ಗೆ ಮಂಗಳವಾರ ಸಂಜೆ 7ರ ಸಮಯದಲ್ಲಿ ಶೀತ, ಕೆಮ್ಮು ಬಂದಿದೆ. ತಾಯಿ ಮಾನಸಾ ಮನೆಯಲ್ಲಿ ಕೆಲವು ದಿನಗಳ ಹಿಂದೆ ತಂದಿಟ್ಟಿದ್ದ ಕೆಮ್ಮಿನ ಔಷಧಿ ಅವಧಿ ಮೀರಿದ್ದನ್ನು
ಅರಿಯದೇ ಮಗುವಿಗೆ ಕುಡಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮಗು, ಗಂಟಲು ನೋವೆಂದು ಹೇಳಿ ಅಸ್ವಸ್ಥಗೊಂಡಿದೆ. ಪಟ್ಟಣದ
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. “ಮಗು ಅಸ್ವಸ್ಥಗೊಂಡಿತ್ತು, ವೈದ್ಯರು ತುರ್ತಾಗಿ ಚಿಕಿತ್ಸೆ ನೀಡದ್ದರಿಂದ ಮೃತಪಟ್ಟಿದೆ’ ಎಂದು ಪೋಷಕರು ಆರೋಪಿಸಿದ್ದಾರೆ.

ಮಗು ಆಸ್ಪತ್ರೆಗೆ ಬರುವ ಮುಂಚೆಯೇ ಮೃತಪಟ್ಟಿದೆ. ಆದರೂ ಪೋಷಕರ ಮನವಿ ಮೇರೆಗೆ  ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ರವಿ ಇಸಿಜಿ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ಉಸಿರಾಟ ನಿಂತು ಹೋಗಿರುವುದು ಖಚಿತವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಅರವಿಂದ್‌ ಸ್ಪಷ್ಟನೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next