Advertisement

ಮಕ್ಕಳನ್ನು ಗುಂಡು ಹಾರಿಸಿ ಕೊಂದು ಬಾವಿಗೆ ಎಸೆದರು

12:54 AM May 26, 2019 | Sriram |

ಲಕ್ನೋ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಶುಕ್ರವಾರ ಸಂಜೆ ಏಕಾಏಕಿ ನಾಪತ್ತೆಯಾಗಿದ್ದ ಮೂವರು ಮಕ್ಕಳ ಮೃತದೇಹಗಳು ಶನಿವಾರ ಬೆಳಗ್ಗೆ ಕೊಳವೆಬಾವಿಯೊಂದರಲ್ಲಿ ಪತ್ತೆಯಾಗಿವೆ.

Advertisement

ಮಕ್ಕಳ ದೇಹದಲ್ಲಿ ಗುಂಡಿನ ಗಾಯಗಳು ಪತ್ತೆಯಾಗಿವೆ. ಮೃತರನ್ನು ಆಸ್ಮಾ (8), ಅಲಿಬಾ (7) ಹಾಗೂ ಅಬ್ದುಲ್ಲಾ (8) ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಇವರನ್ನು ಅಪಹರಿಸಿ, ಅನಂತರ ಗುಂಡು ಹಾರಿಸಿ ಕೊಂದು, ಕೊಳವೆಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಏಕಾಏಕಿ ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಶುಕ್ರವಾರವೇ ಹುಡುಕಾಟ ನಡೆಸಿದ್ದ ಪೋಷಕರು, ಅನಂತರ ಪೊಲೀಸರಿಗೆ ಲಿಖೀತ ದೂರು ಸಲ್ಲಿಸಿದ್ದರೂ, ಪೊಲೀಸರು ಎಫ್ಐಆರ್‌ ದಾಖಲಿಸಿರಲಿಲ್ಲ ಎಂದು ಪೋಷಕರು ದೂರಿದ್ದಾರೆ. ಕರ್ತವ್ಯ ಲೋಪದಡಿ ಸಂಬಂಧಪಟ್ಟ ಪೊಲೀಸ್‌ ಸಿಬಂದಿಯನ್ನು ಅಮಾನತುಗೊಳಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿರುವುದಾಗಿ ಬುಲಂದರ್‌ಶಹರ್‌ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಕೊಲಾಂಚಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next