Advertisement

ಸಿಬಿಐ, ಇಡಿ, ಐಟಿ ತನಿಖೆಗೆ ಒಳಪಡಿಸಲು ಆಗ್ರಹ

01:34 AM Jun 11, 2019 | Team Udayavani |

ಬೆಂಗಳೂರು: ಐಎಂಎ ಜುವೆಲ್ಲರ್ ಮಾಲೀಕ ಮನ್ಸೂರ್‌ ಖಾನ್‌ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಸಿಬಿಐ, ಇಡಿ ಹಾಗೂ ಐಟಿ ಸೇರಿದಂತೆ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಡ್ಡಿ ಆಸೆಗೆ ಹಣ ಹೂಡಿದ ಸಾವಿರಾರು ಮಂದಿ ಮೋಸ ಹೋಗಿದ್ದು, ಇದೊಂದು ದೊಡ್ಡ ವಂಚನೆಯ ಜಾಲವಾಗಿದೆ. ಸಚಿವರು, ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳೊಂದಿಗೆ ಆಪ್ತತೆ ಇದೆ ಎಂಬಂತೆ ಮಾಲೀಕ ಬಿಂಬಿಸಿ ವಂಚಿಸಿ ಪರಾರಿಯಾಗಿದ್ದಾನೆ.

ವರ್ಷದ ಹಿಂದೆಯೇ ಎಂ.ಎಚ್‌.ಖಾನಾಪುರ ಎಂಬುವರು ಹಿಂದೆ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‌ ಅವರಿಗೆ ದೂರು ನೀಡಿದ್ದರೂ ದೂರುದಾರರ ಯಾವುದೆ ಹೇಳಿಕೆ ಪಡೆಯದೆ ಕ್ಲೀನ್‌ ಚಿಟ್‌ ನೀಡಿದ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಹೆಸರೇಳಿಕೊಂಡು ವಂಚನೆ ಮಾಡಿರುವುದರಿಂದ ನ್ಯಾಯಯುತ ತನಿಖೆಯಾಗುವಂತೆ ಕಾಣುತ್ತಿಲ್ಲ. ಹಾಗಾಗಿ ಇಡಿ, ಐಟಿ, ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ. ವಂಚಕನ ಪತ್ತೆ ಹಾಗೂ ವಂಚನೆಗೆ ಒಳಗಾದವರಿಗೆ ನ್ಯಾಯ ಕೊಡಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಕೋರಿ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next