Advertisement

ಶೋಭಾ ಟ್ವೀಟ್‌ ವಿರುದ್ಧ ಪ್ರಕರಣ

11:28 PM Apr 17, 2019 | Team Udayavani |

ಉಡುಪಿ: ರಾಮನವಮಿ ಪ್ರಯುಕ್ತ ಮಾಡಿರುವ ಟ್ವೀಟ್‌ನಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಏ.13ರಂದು ರಾಮನವಮಿ ಶುಭಾಶಯ ಕೋರುವಾಗ ಶ್ರೀರಾಮನು ಬಿಲ್ಲಿನಿಂದ ಬಾಣ ಬಿಡುತ್ತಿದ್ದು, ಬಾಣದಲ್ಲಿ ಮೋದಿಯವರ ಚಿತ್ರವಿತ್ತು. ಆ ಬಾಣವನ್ನು ರಾವಣನ ದಶಮುಖಗಳಿರುವ ಹಲವು ವಿರೋಧ ಪಕ್ಷಗಳ ಮುಖಂಡರ ಮುಖಗಳ ಭಾವಚಿತ್ರಕ್ಕೆ ಗುರಿ ಮಾಡುವಂತೆ ಚಿತ್ರಿಸಲಾಗಿತ್ತು.

ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮತ್ತು ಹಗೆ, ದ್ವೇಷ ಉಂಟು ಮಾಡಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ನೀಡಿರುವ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next