Advertisement

ರಾಜಕಾಲುವೆಗೆ ಉರುಳಿದ ಕಾರು: ಚಾಲಕ ಸಾವು

12:35 AM Apr 13, 2019 | Team Udayavani |

ಬೆಂಗಳೂರು: ವೇಗವಾಗಿ ಬಂದ ಕಾರು ಆಯತಪ್ಪಿ ರಾಜಕಾಲುವೆಗೆ ಬಿದ್ದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಎಚ್‌ಎಸ್‌ಆರ್‌ ಹಾಲನಾಯಕನಹಳ್ಳಿಯ ಬಳಿ ನಡೆದಿದೆ.

Advertisement

ದೊಡ್ಡಕನ್ನಹಳ್ಳಿಯ ನಿವಾಸಿ ಪವನ್‌ (26) ಮೃತರು. ದುರ್ಘ‌ಟನೆಯಲ್ಲಿ ಕಾರಿನಲ್ಲಿದ್ದ ಬಾಬಾಜಾನ್‌ ಹಾಗೂ ಶಾಂತಕುಮಾರ್‌ ಎಂಬುವವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಕರ ಮನೆಗೆ ಸ್ನೇಹಿತರ ಜತೆ ತೆರಳಿದ್ದ ಪವನ್‌ ರಾತ್ರಿ 11 ಗಂಟೆ ಸುಮಾರಿಗೆ ವಾಪಾಸ್‌ ಆಗುತ್ತಿದ್ದರು. ಹಾಲನಾಯಕನಹಳ್ಳಿಯ ಸರ್ಜಾಪುರ ಬಳಿ ತಿರುವು ಪಡೆದುಕೊಳ್ಳುತ್ತಿದ್ದಾಗ ಆಯತಪ್ಪಿ ವೇಗದಲ್ಲಿ ಕಾರು ರಾಜಕಾಲುವೆಗೆ ಬಿದ್ದಿದೆ.

ಈ ಅವಘಡ ಗಮನಿಸಿದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪವನ್‌ ದುರ್ಘ‌ಟನೆಯಲ್ಲಿ ಮೃತಪಟ್ಟಿದ್ದಾರೆ.

ಬಾಬಾಜಾನ್‌ ಹಾಗೂ ಶಾಂತಕುಮಾರ್‌ ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next