Advertisement

ಲಾರಿಗೆ ಕಾರು ಡಿಕ್ಕಿ, ಐವರ ದುರ್ಮರಣ

02:03 AM May 27, 2019 | Team Udayavani |

ನವಲಗುಂದ: ಕಾರಿನ ಟಯರ್‌ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎರಡು ಕುಟುಂಬದ ಐವರು ಮೃತಪಟ್ಟ ಘಟನೆ ಭಾನುವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಅಮರಗೋಳ ಕ್ರಾಸ್‌ ಹತ್ತಿರ ಸಂಭವಿಸಿದೆ.

Advertisement

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳ್ಳಿ (ಹಾಲಿ ತಿರುಚನಾಪಳ್ಳಿ ತಮಿಳುನಾಡು ನಿವಾಸಿ) ಗ್ರಾಮದ ರವಿ ಜಂಬುಲಿಂಗಪ್ಪ ಹಂಡಿ (40), ಪುತ್ರಿ ಲೇಖಾಶ್ರೀ ರವಿ ಹಂಡಿ (19), ಪುತ್ರ ನವೀನ ರವಿ ಹಂಡಿ (14), ಬಾಗಲಕೋಟೆಯ ಕೌಲಪೇಟೆಯ ಹಿರಿಯ ಪತ್ರಕರ್ತ ಆನಂದ ಜಿಗಜಿನ್ನಿ ಅವರ ಪುತ್ರಿ ವರ್ಷಾ ಜಿಗಜಿನ್ನಿ (12), ಸಹೋದರನ ಪುತ್ರ ಶರಣ ವಿನೋದ ಜಿಗಜಿನ್ನಿ (7) ಮೃತರು. ಪತ್ರಕರ್ತ ಆನಂದ ಅವರ ಸಹೋದರಿ ಪತಿ ರವಿ ಹಂಡಿ, ನವೀನ ಹಂಡಿ ಹಾಗೂ ವರ್ಷಾ ಜಿಗಜಿನ್ನಿ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಲೇಖಾಶ್ರೀ ಹಂಡಿ ಹಾಗೂ ಶರಣ ಜಿಗಜಿನ್ನಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪ ಟ್ಟಿದ್ದಾರೆ. ಮೃತಪಟ್ಟವರು ಸೋಮವಾರ ಶ್ರೀಶೈಲಕ್ಕೆ ಹೋಗುವವರಿದ್ದರು. ದಾವಣಗೆರೆಯಲ್ಲಿರುವ ರವಿ ಹಂಡಿ ಸಹೋದರಿಮನೆಯಿಂದ ಭಾನುವಾರ ಬಾಗಲಕೋಟೆ ಕಡೆಗೆ ಅವರೆಲ್ಲ ಪ್ರಯಾಣ ಬೆಳೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next