Advertisement

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

12:51 AM Jan 25, 2022 | Team Udayavani |

ಬೆಂಗಳೂರು: ದೇಶಾದ್ಯಂತ ಪಂಚರಾಜ್ಯಗಳ ಚುನಾವಣೆ ಬಿಸಿ ಏರಿರುವ ನಡುವೆ ರಾಜ್ಯದ ರಾಜಕೀಯ ಪಕ್ಷಗಳೂ ಈ ರಾಜ್ಯಗಳ ಚುನಾವಣ ಫ‌ಲಿತಾಂಶದ ಮೇಲೆ ಕಣ್ಣಿಟ್ಟಿವೆ. ಸಂಪುಟ ಪುನಾರಚನೆ ಮತ್ತೆ ಸದ್ದು ಮಾಡುತ್ತಿದ್ದರೂ ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ಹೊರಬೀಳುವ ಮಾ. 10ರ ಅನಂತರವೇ ಈ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

Advertisement

2023ರ ಮೇಯಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳ ಫ‌ಲಿತಾಂಶ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳ ರಾಜಕೀಯ ಲೆಕ್ಕಾಚಾರಗಳನ್ನು ಬದಲು ಮಾಡಬಲ್ಲುದು. ಸಂಕ್ರಾಂತಿಯ ಅನಂತರ ಸಂಪುಟ ಪುನಾರಚನೆ ಆಗಿಯೇ ಆಗುತ್ತದೆ ಎಂದು ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ. ಆದರೆ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೂ ಕಷ್ಟ. ಬಜೆಟ್‌ ಅಧಿವೇಶನವೂ ಇರುವುದರಿಂದ ಬದಲಾವಣೆ ಯುಗಾದಿಗೆ ಎಂಬಂತಾಗಿದೆ. ಆದರೆ ಪಂಚರಾಜ್ಯ ಫ‌ಲಿತಾಂಶದ ಬಳಿಕ ಏನು ಎಂಬ ಆತಂಕವೂ ಇರುವುದರಿಂದ ಒತ್ತಡ ಮುಂದುವರಿದಿದೆ.

ಇದನ್ನೂ ಓದಿ:ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ

ಅಲ್ಲದೆ, ಕಾಂಗ್ರೆಸ್‌ನ ಮೇಕೆದಾಟು ಯಾತ್ರೆ, ಕೃಷ್ಣಾ, ಮಹದಾಯಿ ಯಾತ್ರೆ ಹಾಗೂ ರಾಜ್ಯ ಪ್ರವಾಸ ಕಾರ್ಯಕ್ರಮ ಗಳು ಪಂಚರಾಜ್ಯ ಚುನಾವಣಾ ಫ‌ಲಿತಾಂಶದ ಬಳಿಕವೇ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಜೆಡಿಎಸ್‌ನ ಜಲಧಾರೆ ಯಾತ್ರೆಯೂ ಮಾ. 10ರ ಅನಂತರವೇ ಆರಂಭವಾಗಲಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next