Advertisement

ಈಜಲು ಹೋದ ಬಾಲಕ ನದಿಯಲ್ಲಿ ಮುಳುಗಿ ಸಾವು

11:08 PM Apr 29, 2019 | Lakshmi GovindaRaju |

ಘಟಪ್ರಭಾ: ಕೊಣ್ಣೂರ ಪಟ್ಟಣದ ಸಮೀಪ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಸೋಮವಾರ ಬೆಳಗ್ಗೆ ಈಜಲು ಹೋದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪ್ರಶಾಂತ ಕೌಜಲಗಿ (11) ಮೃತ ಬಾಲಕ. ಈತ ಸ್ಥಳೀಯ ನಿವಾಸಿ ಜಯಪಾಲ ಕೌಜಲಗಿ ಅವರ ಪುತ್ರ, ಸ್ಥಳೀಯ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದ.

Advertisement

ಪ್ರತಿದಿನ ತಂದೆಯ ಜೊತೆಗೆ ನದಿಗೆ ಸ್ನಾನ ಮಾಡಲು ಬಾಲಕ ಹೋಗುತ್ತಿದ್ದ. ಸೋಮವಾರ ತಂದೆ ಬೇರೆ ಕೆಲಸದ ನಿಮಿತ್ತ ನದಿಗೆ ಹೋಗಿರಲಿಲ್ಲ. ಬಾಲಕ ತಾನೊಬ್ಬನೇ ಸ್ನಾನ ಮಾಡಲು ನದಿಗೆ ತೆರಳಿದ್ದ. ದಡದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಆಕಸ್ಮಾತ್‌ ಕಾಲು ಜಾರಿ ನದಿಯಲ್ಲಿ ಬಿದ್ದ.

ಬಾಲಕ ನದಿಯಲ್ಲಿ ಬಿದ್ದರುವುದನ್ನು ಸ್ಥಳದಲ್ಲಿದ್ದ ಜನರು ಗಮನಿಸಿ, ಉಳಿಸಲು ಪ್ರಯತ್ನಿಸಿದರು. ಆದರೆ, ಬಾಲಕ ಅಷ್ಟರಲ್ಲಿಯೇ ನದಿಯಲ್ಲಿ ಮುಳುಗಿ ಮಾಯವಾಗಿದ್ದ. ಎಷ್ಟೆ ಪ್ರಯತ್ನ ಪಟ್ಟರೂ ಬಾಲಕ ಅವರ ಕೈಗೆ ಸಿಗಲಿಲ್ಲ.

ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಸ್ಥಳೀಯರೊಂದಿಗೆ ಸುದೀರ್ಘ‌ ಶೋಧ ಕಾರ್ಯ ನಡೆಸಿ ಸಂಜೆ 5.30ರ ಸುಮಾರಿಗೆ ಮೃತದೇಹ ಪತ್ತೆ ಮಾಡಿದರು. ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next