Advertisement

ಕಾಶ್ಮೀರದಲ್ಲಿ ಪತ್ಯೇಕತಾವಾದಿಗಳಿಗೆ ನೀಡಿದ್ದ ಭಧ್ರತೆ ವಾಪಾಸ್

07:16 AM Feb 17, 2019 | |

ಹೊಸದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರದಲ್ಲಿ ಭಾರತೀಯ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರ ಬಾಂಬ್ ದಾಳಿಯ ನಂತರ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದ್ದು, ಪತ್ಯೇಕತಾವಾದಿ ಹುರಿಯತ್ ಸಂಘಟನೆಯ ನಾಯಕರಿಗೆ ನೀಡಿದ್ದ ಭದ್ರತೆಯನ್ನು ವಾಪಾಸ್ ಪಡೆದುಕೊಂಡಿದೆ. 

Advertisement

ಹುರಿಯತ್ ಸಂಘಟನೆ ನಾಯಕರಾದ ಮಿರ್ವೇಜ್ ಉಮರ್ ಫಾರೂಕ್, ಅಬ್ದುಲ್ ಘನಿ ಭಟ್,  ಹಮೀಮ್ ಖುರೇಷಿ, ಶಬ್ಬೀರ್ ಶಾ, ಬಿಲಾಲ್ ಲೋನ್ ಅವರಿಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರಕಾರ ವಾಪಾಸ್ ಪಡೆದುಕೊಳ್ಳುವ ನಿರ್ಧಾರ ಮಾಡಿದೆ. ರವಿವಾರ ಸಂಜೆಯಿಂದ ಜಾರಿಗೊಳ್ಳುವಂತೆ ಈ ಆದೇಶ ಹೊರಬಿದ್ದಿದ್ದು ಈ ಐವರು ನಾಯಕರಿಗೆ ನೀಡಿರುವ ಸರ್ಕಾರಿ ವಾಹನಗಳು ಮತ್ತು ಭಧ್ರತೆಯನ್ನು ಹಿಂಪಡೆಯಲಾಗಿದೆ.

ಪುಲ್ವಾಮಾ ದಾಳಿಯ ನಂತರ ಕೇಂದ್ರ ಸರಕಾರ ಉಗ್ರರನ್ನು ಪೋಷಿಸುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನದ ಮೇಲೆ ಹಲವಾರು ಆರ್ಥಿಕ ಮತ್ತು ರಾಜತಾಂತ್ರಿಕ ಕ್ರಮಗಳ ಸಹಿತ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಿರುವುದನ್ನು ಇಲ್ಲಿ ನಾವು ಗಮನಿಸಬಹುದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next