Advertisement

ನಿನ್ನೆಯ ಬಿಜೆಪಿ ಕೋರ್‌ ಕಮಿಟಿ ಸಭೆ ರದ್ದು

03:45 AM Jan 03, 2017 | Team Udayavani |

ಬೆಂಗಳೂರು: ಸೋಮವಾರ ನಿಗದಿಯಾಗಿದ್ದ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಕೊನೆಯ ಕ್ಷಣದಲ್ಲಿ ರದ್ದಾಗಿದೆ.

Advertisement

ಬೆಳಗ್ಗೆ 10ರಿಂದ 12ಗಂಟೆವರೆಗೆ ಮಾಜಿ ಸಚಿವ ಶ್ರೀನಿವಾಸ್‌ ಸೇರ್ಪಡೆ ಕಾರ್ಯಕ್ರಮ ಮುಗಿಸಿದ ನಂತರ ಕೋರ್‌ ಕಮಿಟಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸೇರ್ಪಡೆ ಕಾರ್ಯಕ್ರಮ ಶುರುವಾಗಿದ್ದೇ 11.30ಕ್ಕೆ. ಮುಗಿದದ್ದು 2.30ಕ್ಕೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರು ಪೂರ್ವ ನಿಗದಿಯಂತೆ ಮಧ್ಯಾಹ್ನ ಬರ ಅಧ್ಯಯನ ಪ್ರವಾಸಕ್ಕೆ ತೆರಳಬೇಕಾಗಿದ್ದರಿಂದ ಕೋರ್‌ ಕಮಿಟಿ ಸಭೆ ರದ್ದುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next