Advertisement

ಮಲಗಿದ್ದ ಮಗುವಿಗೆ ಕಚ್ಚಿ ಕೊಂದ ಹೆಗ್ಗಣ

09:52 AM Oct 22, 2019 | keerthan |

ವಿಜಯಪುರ: ಮನೆಯಲ್ಲಿ ಮಲಗಿದ್ದ ಮಗು ಹೆಗ್ಗಣ ಕಚ್ಚಿ ಮೃತಪಟ್ಟಿರುವ  ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ.

Advertisement

ಗೀತಾ-ಗೋಲಪ್ಪ ದಂಪತಿಗಳ 6 ತಿಂಗಳ ಮಗು ಸಾವನ್ನಪ್ಪಿದೆ. ಮೂಲತಃ ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳಾಗಿದ್ದ ಈ ದಂಪತಿ ಹಬ್ಬಕ್ಕೆಂದು ಗೀತಾ ತವರು ಮನೆಗೆ ಬಂದಿದ್ದಳು.

ಶನಿವಾರ ರಾತ್ರಿ ಗಂಡ-ಹೆಂಡತಿ ಪಕ್ಕದಲ್ಲೇ ಮಲಗಿದ್ದ ವೇಳೆ ಹೆಗ್ಗಣ ಮಗುವಿನ ಬಲಗಾಲಿಗೆ ಕಚ್ಚಿದೆ. ಹೆಗ್ಗಣ ಕಚ್ಚಿದ್ದರಿಂದ ಮಗು ಕೊಸರಾಟ ನಡೆಸಿದಾಗ ಮುಖ ಕೆಳಗೆ ಮಾಡಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.

ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಲಕೇರಿ ಪೊಲೀಸ್ ಠಾಣೆ ವ್ಶಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next