Advertisement

UV Fusion: ಪ್ರೀತಿ ಎಂಬ ಸುಂದರ ಬಂಧ

04:05 PM Jan 06, 2024 | Team Udayavani |

ಕಾಲವೇ ಹಾಗೆ ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಬಿಡುತ್ತದೆ. ಹಾಗೆಯೇ ಪರಿಚಿತರನ್ನು ಅಪರಿಚಿತರನ್ನಾಗಿ ಮಾಡಿಬಿಡುತ್ತದೆ. ಒಬ್ಬರ ನಡುವೆ ಅದೆಷ್ಟೇ ಪ್ರೀತಿ, ಕಾಳಜಿ ಇದ್ದರೂ ಆ ಅತಿಯಾದ ಪ್ರೀತಿಯೇ ಬದುಕಿನಿಂದ ಅವರನ್ನು ದೂರ ಮಾಡಿ ಬಿಡುತ್ತೆ ಅಲ್ವಾ..?

Advertisement

ಒಮ್ಮೊಮ್ಮೆ ಪರಿಚಯವೇ ಇಲ್ಲದ ವ್ಯಕ್ತಿ, ಬಯಸದೆ ಸಿಕ್ಕ ಪ್ರೀತಿ ಎರಡೂ ಊಹೆಗೂ ಮೀರಿದ ಬಂಧವನ್ನು ಕಟ್ಟಿಕೊಡುತ್ತದೆ. ಅಂತೆಯೇ ನನ್ನ ಬದುಕಲ್ಲೂ ಅಪರಿಚಿತ ವ್ಯಕ್ತಿಗಳಿಂದ ಆಕಾಶದಷ್ಟು, ಯಾವತ್ತೂ ಎಣಿಸದ ಪ್ರೀತಿ ಸಿಕ್ಕಿತು. ಮೊದಲು ನಾನೂ ನನ್ನ ಬದುಕಲ್ಲಿ ಪ್ರೀತಿಗೆ ಜಾಗವೇ ಇಲ್ಲ, ನನಗದು ಸೂಕ್ತವೇ ಅಲ್ಲ ಅಂದುಕೊಂಡಿದ್ದಾರೆ. ಆದರೆ ಅಂದು ಜಂಗಮವಾಣಿಗೆ ಬಂದು ಬಿದ್ದ ಒಂದು ಸಂದೇಶ ಎಲ್ಲವನ್ನೂ ಬದಲಿಸಿತು!

ನನಗೆ ಆ ಸಂದೇಶವನ್ನು ಓದೋ ಆಸಕ್ತಿಗಿಂತ ಜಂಗಮವಾಣಿಯಿಂದಲೇ ದೂರವಿದ್ದು ಬಿಡೋಣ ಅನ್ನುವಷ್ಟು ನಿರಾಸಕ್ತಿ ನನ್ನ ಮನಸ್ಸನ್ನು ಆವರಿಸಿಕೊಂಡಿತ್ತು. ಆದರೆ ದೈವಿಚ್ಛೆಯೋ ಏನೋ ಗೊತ್ತಿಲ್ಲ ಆ ಸಂದೇಶದ ಜೊತೆಗೆ ಆ ವ್ಯಕ್ತಿ ನನ್ನ ಮನಸ್ಸಿನ ಕದವನ್ನು ತಟ್ಟಿದ್ದರು. ಆ ಸಂದೇಶದಲ್ಲಿ ವಿಷಯ ಏನಿಲ್ಲವಾದರೂ ಆ ವ್ಯಕ್ತಿ ಮಾತ್ರ ನನ್ನ ಜೀವನದಲ್ಲಿ ಎಲ್ಲವೂ ಆದರು.

ಪ್ರತಿಯೊಬ್ಬರ ಜೀವನದಲ್ಲೂ ಈ ಸಂಗತಿ ಸಾಮಾನ್ಯವೇ. ಆದರೆ ನನ್ನ ಜೀವನದಲ್ಲಿ ವ್ಯಕ್ತಿಯಲ್ಲ, ವ್ಯಕ್ತಿಗಳ ಪ್ರವೇಶವಾದದ್ದು ಅರಗಿಸಿಕೊಳ್ಳಲಾಗದ ಸತ್ಯ. ಒಬ್ರು ಪ್ರೀತಿಯಿಂದಲೇ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂದರೆ, ಇನ್ನೊಬ್ರು ಮುಖದಲ್ಲಿರೋ ನಗುವೇ ಎಲ್ಲದಕ್ಕೂ ಪರಿಹಾರ ಅಂತಾರೆ.

ನನಗಂತೂ ಒಮ್ಮೆ ದಿಗ್ಬ›ಮೆಯಾಯಿತು. ಗುಲಾಬಿ ಹೂವಿನ ಗಿಡದಲ್ಲಿ ಮುಳ್ಳಿದ್ದರೂ ಹೂವಿನ ಅಂದದಿಂದಲೇ ಪರರ ಮನಸ್ಸನ್ನು ಗೆಲ್ಲುತ್ತದೆ. ಹಾಗೆಯೇ ನನಗೆ ಸಿಕ್ಕ ವ್ಯಕ್ತಿಗಳೂ ಚಹರೆಯಲ್ಲಿರೋ ನಗುವಿನಿಂದ ನನ್ನ ಮನಸ್ಸಿನ ನೋವನ್ನು ಮರೆಮಾಚಿಸಿಬಿಡುತ್ತಿದ್ದರು. ತಾಯಿಯಂತೆ ಅಕ್ಕರೆ ತೋರಿ, ಅಪ್ಪನಂತೆ ಗದರಿ, ಅಣ್ಣನಂತೆ ಮುದ್ದಾಡಿ ಮನಸ್ಸು ತುಂಬಾ ಸಿಹಿಯೇ ಹಂಚುತ್ತಿದ್ದರು. ನಾನಂತೂ ಆ ಮನಸ್ಸುಗಳ ಮಧ್ಯೆ ಖುಷಿಯಲ್ಲೇ ಬಂಧಿಯಾಗಿಬಿಟ್ಟಿದ್ದೆ.

Advertisement

ಬದುಕೇ ಹಾಗೆ ಅಲ್ವಾ? ಯಾವುದು, ಯಾವಾಗ, ಯಾರಿಗೆ ಸಿಗಬೇಕೋ ಅದು ಆ ಸೂಕ್ತ ಸಮಯಕ್ಕೆ ಸಿಗೋದು. ಬೇಕು ಬೇಡಗಳ ಮಧ್ಯೆ ಊಹಿಸದ ಪ್ರೀತಿ ಸಿಕ್ಕಾಗ ಯಾವ ಮನುಜ ಬೇಡ ಅನ್ನುತ್ತಾನೆ ಹೇಳಿ? ಹಾಗೆಯೇ ನಾನು ಕೂಡ ಸಿಕ್ಕ ಕಾಳಜಿಯ ಹೊದಿಕೆಯನ್ನು ಸರಿಸಲೇ ಇಲ್ಲ. ಇಷ್ಟೆಲ್ಲಾ ಹೇಳಿ ಇದರ ರೂವಾರಿಗಳನ್ನೇ ಪರಿಚಯ ಮಾಡದೇ ಹೋದರೆ ತಪ್ಪಾಗಬಹುದು ಅಲ್ವಾ?

ಬೆನ್ನ ತುಂಬಾ ಜವಾಬ್ದಾರಿ ಹೊತ್ತು, ಕಣ್ಣು ತುಂಬಾ ಕನಸು ಹೊತ್ತು, ಕಷ್ಟ ಸುಖದಲ್ಲಿ ಭಾಗಿಯಾಗಿ ಜೊತೆಯಲ್ಲೇ ನಿಂತ ಗೆಳೆಯ- ಅವನೊಬ್ಬನೇ ನಿಶಾಂತ್‌. ಮುಖ ತುಂಬಾ ನಗುವ ಚೆಲ್ಲಿ, ನಿಷ್ಕಲ್ಮಶ ಮನಸ್ಸಿಂದ ಕಾಳಜಿ ತೋರಿ, ಮುಗ್ಧತೆಯಿಂದಲೇ ಪ್ರೀತಿ ಹಂಚುವಾಕೆ ನನ್ನ ನಲ್ಮೆಯ ಅಕ್ಕ ನಿಶ್ಮಿತಾ.

ಪರಿಚಯದ ಆರಂಭ ತಿಳಿದಿಲ್ಲ, ಅಂತ್ಯದ ಹಾದಿಯೇ ಇಲ್ಲ. ಆದರೆ ಬಯಸದೆ ಸಿಕ್ಕ ಪ್ರೀತಿ ಮಾತ್ರ ವರ್ಣನೆಗೂ ಮೀರಿದ್ದು. ಅನಿರೀಕ್ಷಿತ ಸಂಬಂಧಗಳೇ ಹಾಗೆ ಎಲ್ಲವನ್ನು ಒಗ್ಗೂಡಿಸಿ ಚೆಂದದ ಬದುಕ ಕಟ್ಟುತ್ತವೆ. ಪ್ರೀತಿ ಅಂದರೆ ಮೋಸವಲ್ಲ ಬದಲಾಗಿ ಸಂಬಂಧದ ನಡುವಿರೋ ನಂಬಿಕೆಯಷ್ಟೇ, ಅಲ್ಲವೇ?

ಅರ್ಚನಾ

ವಿವಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next