Advertisement

ಕಳಸಾ ತಡೆಗೋಡೆ ಒಡೆದಿದೆ: ಪಾಲೇಕರ್‌ 

06:30 AM Jan 29, 2018 | Team Udayavani |

ಪಣಜಿ: ನ್ಯಾಯಾಧಿಕರಣದಲ್ಲಿ ತಮಗೆ ತೊಂದರೆಯುಂಟಾಗಲಿದೆ ಎಂದು ತಿಳಿದುಕೊಂಡು ಕರ್ನಾಟಕ ತಾನೇ ಕಳಸಾ- ಬಂಡೂರಿ ನಾಲೆಗೆ ಕಟ್ಟಿದ್ದ ತಡೆಗೋಡೆಯನ್ನು ಒಡೆದು ಹಾಕಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್‌ ಆರೋಪಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಮಹದಾಯಿ ಹೋರಾಟದಲ್ಲಿ ಗೋವಾದ ಪರಿಸರ ವಾದಿ ಗಳ ಹೋರಾಟ ಯೋಗ್ಯ ರೀತಿಯಲ್ಲಿ ಸಾಗುತ್ತಿದೆ. ಸರ್ಕಾರ ನೇಮಕ ಮಾಡಿರುವ ವಿಶೇಷ ಸಮಿತಿ ಕೂಡ ಕಳಸಾ-ಬಂಡೂರಿ ನಾಲೆಯ ಪರಿಶೀಲನೆ ನಡೆಸುತ್ತಿದೆ.

ಮಹದಾಯಿ ನದಿ ನೀರನ್ನು ಉಳಿಸಿಕೊಳ್ಳಲು ಗೋವಾದಲ್ಲಿ ನಡೆದಿರುವ ಹೋರಾಟ ಕಂಡು ಕರ್ನಾಟಕವು ನ್ಯಾಯಾಧಿಕರಣದಲ್ಲಿ ತನ್ನ ಪಾಲಿಗೆ ಈ ವಿಷಯವೇ ಮುಳುವಾಗಲಿದೆ ಎಂದು ಅರಿತು ಸ್ವತಃ ಕಳಸಾ- ಬಂಡೂರಿ ನಾಲೆಗೆ ನಿರ್ಮಿಸಿದ್ದ ತಡೆಗೋಡೆಯನ್ನು ಒಡೆದು ಹಾಕಿದೆ. ಮಹದಾಯಿ ನದಿ ನೀರನ್ನು ತಡೆಹಿಡಿದು ತಿರುಗಿಸಿಕೊಳ್ಳಲು ಕರ್ನಾಟಕ ನಡೆಸಿರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next