Advertisement

ಅಕ್ರಮ ಆಸ್ತಿ ಮಾಡಿದವರ ಮೇಲೆ ದಾಳಿ ಸಹಜ : ರಾಯರಡ್ಡಿ

03:45 AM Jan 27, 2017 | Team Udayavani |

ಕೊಪ್ಪಳ: ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿರುವುದು  ಒಳ್ಳೆಯ ಬೆಳವಣಿಗೆ. ಯಾರು ಅಕ್ರಮ ಆಸ್ತಿ ಮಾಡಿರುತ್ತಾರೋ ಅಂಥವರ ಮೇಲೆ ಐಟಿ ದಾಳಿ ಆಗೋದು ಸಹಜ. ಪ್ರತಿ ವರ್ಷವೂ ಐಟಿ ದಾಳಿ ಆಗುತ್ತಿರುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಟಾಳ್ಕರ್‌ ಮನೆ ಮೇಲೆ ನಡೆದ ದಾಳಿ ಬಗ್ಗೆ  ತಾವು ವೈಯಕ್ತಿಕವಾಗಿ ಮಾತನಾಡಲ್ಲ. ರಮೇಶ್‌ ಜಾರಕಿಹೊಳಿ ಸಚಿವರಾಗಿದ್ದಕ್ಕೆ ಐಟಿ ದಾಳಿ ಪ್ರಕರಣ ಬೆಳಕಿಗೆ ಬಂದಿದೆ ಎಂದರು.

ಕಂಬಳ ಸ್ಪರ್ಧೆಯಲ್ಲಿ ಪ್ರಾಣಿಗಳ ಹಿಂಸೆ ನಡೆಯಲ್ಲ. ಅದು ಓಟದ ಸ್ಪರ್ಧೆಯಾಗಿರುವುದರಿಂದ ಆಚರಣೆ ತಪ್ಪಲ್ಲ. ಹಿಂಸಾತ್ಮಕವಾಗಿರುವ ಜಲ್ಲಿಕಟ್ಟು ಸ್ಪರ್ಧೆ ನಡೆಸಲು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಮಾಡಿದೆ. ಅದು ಅವರವರ ಸಂಸ್ಕೃತಿ ಎಂದರು.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ. ಬಿಜೆಪಿ ಹಾಗೂ ರಾಯಣ್ಣ ಬ್ರಿಗೇಡ್‌ ತಿಕ್ಕಾಟದಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಸರ್ಕಾರದ ಜನಪರ ಯೋಜನೆಗಳೂ ಕೈಹಿಡಿಯಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next