Advertisement

ಬಾಂಧವ್ಯ ದೃಢವಾಗಿಯೇ ಇದೆ: ಎಐಎಡಿಎಂಕೆ-ಬಿಜೆಪಿ ಸಂಬಂಧ ಕುರಿತು ಸಿ.ಟಿ. ರವಿ

02:45 AM Dec 31, 2020 | Team Udayavani |

ಚೆನ್ನೈ: ತಮಿಳುನಾಡಿನ ಆಡಳಿತಾರೂಡ ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ಬಾಂಧವ್ಯ ದೃಢವಾಗಿಯೇ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚೆನ್ನೈಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಣ್ಣಾಡಿಎಂಕೆಯೇ ದೊಡ್ಡ ಪಕ್ಷ. ಹೀಗಾಗಿ, ಅದರ ನಾಯಕರೇ ಮುಖ್ಯಮಂತ್ರಿಯಾಗಬೇಕು ಎಂದರು. ಒತ್ತಡ ಹೇರುವ ರಾಷ್ಟ್ರೀಯ ಪಕ್ಷಗಳ ಮೈತ್ರಿ ಬೇಡ ಮತ್ತು ಚುನಾವಣೆಯಲ್ಲಿ ಗೆದ್ದರೆ ಅಧಿಕಾರ ಹಂಚಿಕೆ ಇಲ್ಲ ಎಂಬ ಅಣ್ಣಾಡಿಎಂಕೆ ನಾಯಕರ ಹೇಳಿಕೆ ನಡುವೆಯೇ ರವಿಯವರ ಹೇಳಿಕೆ ಮಹತ್ವ ಪಡೆದಿದೆ.

Advertisement

ಚುನಾವಣ ಆಯೋಗ ವಿಧಾನಸಭೆ ಚುನಾ ವಣೆ ದಿನಾಂಕ ಘೋಷಣೆ ಮಾಡುತ್ತಲೇ, ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ವ್ಯಕ್ತಿ ಎಂಬ ಬಗ್ಗೆ ಎನ್‌ಡಿಎ ನಾಯಕರು ಸಭೆ ಸೇರಿ ನಿರ್ಧರಿಸುತ್ತಾರೆ ಎಂದರು ರವಿ. ರಾಜಕೀಯ ಪ್ರವೇಶ ಮಾಡುವು ದಿಲ್ಲ ಎಂಬ ಸೂಪರ್‌ಸ್ಟಾರ್‌ ರಜನಿ ಕಾಂತ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಅವರ ಬೆಂಬಲ ಯಾಚಿಸುತ್ತೇವೆ. ತಮಿಳುನಾಡಿನ ಹಿತ ಕಾಯುವ ಸಂದರ್ಭದಲ್ಲಿ ಅವರು ಮುಕ್ತ ವಾಗಿ ಮಾತನಾಡಿದ್ದಾರೆ. ಅವರೊಬ್ಬ ದೊಡ್ಡ ನಾಯಕ ಎಂದರು. ಇದೇ ಸಂದರ್ಭದಲ್ಲಿ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next