Advertisement

ಪರಿಸರದ ಹೈನುಗಾರರ ಆರ್ಥಿಕತೆ ವೃದ್ಧಿಗೆ ಸಹಕಾರಿಯಾದ ಸಂಘ

11:01 PM Feb 17, 2020 | mahesh |

ಪ್ರಾರಂಭದಲ್ಲಿ 100 ಲೀ. ಹಾಲು ಸಂಗ್ರಹಣೆಯಾಗುತ್ತಿದ್ದರೂ ಬಳಿಕ ಅಭಿವೃದ್ಧಿಗೊಂಡು ಪ್ರಸ್ತುತ 800 ಲೀ.ಗೂ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿದೆ. ಕೆಎಂಎಫ್‌ ನಂದಿನಿ ಹಾಲು ಮಾರುಕಟ್ಟೆ ವಿಸ್ತರಿಸುವಲ್ಲಿ ಸಂಘವು ಪ್ರಥಮ ಮಾರುಕಟ್ಟೆ ಅಭಿಯಾನ ನಡೆಸಿದೆ.

Advertisement

ಬಂಟ್ವಾಳ ತಾ|ನ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿರುವ ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಪರಿಸರದ ಹೈನುಗಾರ ರರಿಗೆ ಆಸರೆಯಾಗಿದೆ. ಪ್ರಸ್ತುತ ಸಂತೋಷ್‌ ಕುಮಾರ್‌ ಶೆಟ್ಟಿ ಕುಂಟಜಾಲು ಅಧ್ಯಕ್ಷರಾಗಿ, ಜಯಲಕ್ಷ್ಮೀ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಘ ಪುಂಜಾಲಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಎಂಬ ಹೆಸರಿನಲ್ಲಿ 1974ರ ಜನವರಿಯಲ್ಲಿ ದಿ| ಕೆ. ಪುರಂದರ ಭಟ್‌ ಸಾರಥ್ಯದಲ್ಲಿ ಅಂದಿನ ಎಂ.ಎಲ್‌.ಸಿ. ಬಂಟ್ವಾ ಳದ ದಿ| ನಾರಾಯಣ ನಾಯಕ್‌ ಅವರಿಂದ ಉದ್ಘಾಟನೆಗೊಂಡಿತು. ಕೆನರಾ ಮಿಲ್ಕ್ ಯೂನಿಯನ್‌ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುತ್ತಮುತ್ತಲಿನ 14 ಗ್ರಾಮಗಳ ವ್ಯಾಪ್ತಿಯಲ್ಲಿ 1 ಸಾವಿರ ಲೀ.ನ ಗಡಿ ದಾಟಿ ಹಾಲು ಸಂಗ್ರಹಿ ಸುತ್ತಿತ್ತು. ಹಲವು ಏಳು-ಬೀಳುಗಳನ್ನು ಕಂಡ ಸಂಘದಲ್ಲಿ 1981ರಲ್ಲಿ ಹಾಲು ಸಂಗ್ರಹಣೆ ಸ್ಥಗಿತ ಗೊಂಡಿತ್ತು. ಪುನಃ 1984-85ರಲ್ಲಿ ಗುಂಡಿದಡ್ಡ ಕೇಶವ ಪ್ರಭು ಅವರ ಅಧ್ಯಕ್ಷತೆಯಲ್ಲಿ ಅಮೂಲ್‌ ಅಮುಲ್‌ ಮಾದರಿಯ ಉಪನಿಯಮಗಳನ್ನು ಅಳವಡಿಸಿಕೊಂಡು ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಎಂಬ ಹೆಸರಿನಲ್ಲಿ ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿ ಕಾರ್ಯಾರಂಭ ಮಾಡಿತು. ಪ್ರಥಮ ಹಂತದಲ್ಲಿ ಸಂಘವು ನಷ್ಟ ಕಂಡರೂ ಮುಂದೆ 1986- 87ರಲ್ಲಿ ದಿ| ಕೆ. ಪುರಂದರ ಭಟ್‌ ಅವರ ಅಧ್ಯಕ್ಷತೆ ಯಲ್ಲಿ ಸಂಘ ಪ್ರಗತಿ ಹೊಂದಿ ಲಾಭದತ್ತ ಮುಖಮಾಡಿತು. ಪ್ರಾರಂಭದಲ್ಲಿ 100 ಲೀ. ಹಾಲು ಸಂಗ್ರಹಣೆಯಾಗುತ್ತಿದ್ದರೂ ಬಳಿಕ ಅಭಿವೃದ್ಧಿಗೊಂಡು ಪ್ರಸ್ತುತ 800 ಲೀ.ಗೂ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿದೆ. ಕೆಎಂಎಫ್‌ ನಂದಿನಿ ಹಾಲು ಮಾರುಕಟ್ಟೆ ವಿಸ್ತರಿಸುವಲ್ಲಿ ಸಂಘವು ಪ್ರಥಮ ಮಾರುಕಟ್ಟೆ ಅಭಿಯಾನ ನಡೆಸಿ ವ್ಯಾಪ್ತಿಯಲ್ಲಿ ನಂದಿನಿ ಪ್ಯಾಕೆಟ್‌ ಹಾಲು ಸರಬರಾಜು ಮಾಡಿ ಗ್ರಾಹಕರನ್ನು ಆಕರ್ಷಿಸಿದೆ.

ತರಬೇತಿ, ಸವಲತ್ತು
ಸಂಘವು ಪ್ರತಿ ವರ್ಷ ಹಾಲು ಉತ್ಪಾದಕರಿಗೆ ಬೋನಸ್‌ ಹಾಗೂ ಪ್ರೋತ್ಸಾಹಕರ ಬಹುಮಾನ ನೀಡುವ ಜತೆಗೆ ತರಬೇತಿ ಪ್ರವಾಸಗಳನ್ನು ಆಯೋಜಿಸಿದೆ. ಒಕ್ಕೂಟದ ಸಹಯೋಗದಿಂದ ಸದಸ್ಯ ರೈತರಿಗೆ ಅನಿಲ ಸ್ಥಾವರ, ಹಾಲು ಕರೆಯುವ ಯಂತ್ರ, ಹಟ್ಟಿಗೆ ರಬ್ಬರ್‌ ಮ್ಯಾಟ್‌, ಹಸುರು ಹುಲ್ಲು ಬೆಳೆಸಲು ಸಹಾಯಧನ ನೀಡಿ ಪ್ರೋತ್ಸಾಹಿಸುತ್ತದೆ. ಸಂಘದಲ್ಲಿ ಪಶುಗಳ ಕೃತಕ ಗರ್ಭಧಾರಣೆ ಸೌಲಭ್ಯವಿದ್ದು, ವ್ಯಾಪ್ತಿಯಲ್ಲದೇ ಹೊರಗಿನ ಗ್ರಾಮಗಳಿಗೂ ಚಿಕಿತ್ಸಾ ಸೇವೆ ನೀಡುತ್ತಿದೆ.

ಮಾಜಿ ಅಧ್ಯಕ್ಷರು
ಜಿ.ಕೆ. ಕೇಶವ ಪ್ರಭು, ಕೆ. ಪುರಂದರ ಭಟ್‌, ಕೆ. ಗೋವಿಂದ ಭಟ್‌, ದೇವಪ್ಪ ಶೆಟ್ಟಿ ಕುಂಟಜಾಲ್‌, ಯು.ಎಸ್‌. ಚಂದ್ರಶೇಖರ್‌ ಭಟ್‌, ಎಂ.ಡಿ. ಗಣೇಶ್‌, ದೇವಪ್ಪ ಶೆಟ್ಟಿ ಕುಂಟಜಾಲ್‌, ಶ್ರೀಧರ ಶೆಟ್ಟಿ ಭಂಡಾರದಬೆಟ್ಟು, ವಿಟ್ಟಲ ಶೆಟ್ಟಿ, ನಾರಾಯಣ ಶೆಟ್ಟಿ ಕುಮಂಗಿಲ.

Advertisement

ಮಾಜಿ ಕಾರ್ಯದರ್ಶಿಗಳು
ಶೀನ ಶೆಟ್ಟಿ, ದೇವಪ್ಪ ಶೆಟ್ಟಿ, ಅಣ್ಣು ಡಿ., ಮೋಹನ್‌ ಆಚಾರ್ಯ, ಪ್ರದೀಪ್‌ ಕುಮಾರ್‌ ಶೆಟ್ಟಿ.

ಕೃಷಿಯೊಂದಿಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ನಡೆಸ ಬಹುದು. ಸಮರ್ಪಕ ಮಾರ್ಗ ದರ್ಶನ, ಮಾಹಿತಿಗಳಿಂದ ಹೈನು ಗಾರಿಕೆಯಿಂದ ಆರ್ಥಿಕವಾಗಿ ಯಶಸ್ಸು ಗಳಿಸಬಹುದು. ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಸಂಘದ ಪರಿಸರದಲ್ಲಿ ಹೈನುಗಾರ ರಿಗೆ ಉತ್ತಮ ಹಾಲು ದೊರಕಿ ಸಲು ಬೇಕಾದ ಮಾಹಿತಿ, ನೆರವು ನೀಡಲಾಗುತ್ತಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ ಕುಂಟಜಾಲ್‌, ಅಧ್ಯಕ್ಷರು

ಪ್ರಶಸ್ತಿ, ಸಾಧನೆಗಳು
ಸಂಘಕ್ಕೆ ಒಕ್ಕೂಟದ ರಜತ ಮಹೋತ್ಸವ ಸಂದರ್ಭದಲ್ಲಿ ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿ ಬಂದಿದೆ. ಸಂಘದ ನಿರ್ದೇಶಕರೂ ಆಗಿರುವ ಕ್ಸೇವಿಯರ್‌ ಅವರಿಗೆ ಉತ್ತಮ ಹೈನುಗಾರ ಪ್ರಶಸ್ತಿ ಲಭಿಸಿದೆ. 1992ರಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದ ಸಂಘವು ಶುದ್ಧ ಹಾಲು ಉತ್ಪಾದನೆಯ ದೃಷ್ಟಿಯಿಂದ ಪ್ರಥಮವಾಗಿ ಎಲ್ಲ ಹಾಲು ಉತ್ಪಾದಕರಿಗೆ ಸ್ಟೀಲ್‌ ಕ್ಯಾನ್‌ ಹಂಚಿದ ಹೆಗ್ಗಳಿಕೆ ಹೊಂದಿದೆ. ಸಂಘದ ವ್ಯಾಪ್ತಿಯಲ್ಲಿ ಇತರ ಸಂಘಗಳ ಸ್ಥಾಪನೆಗೂ ಕಾರಣೀಭೂತವಾಗಿದೆ.

– ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next