Advertisement

ಮೂಳೂರಿಗೆ ಮತ್ತೆ ದೊಡ್ಡಗೌಡರ ಆಗಮನ

01:44 AM May 10, 2019 | Team Udayavani |

ಕಾಪು: ಕಳೆದ ವಾರವಷ್ಟೇ ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ತೆರಳಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಆಯುರ್ವೇದ ವೈದ್ಯರ ಸೂಚನೆಯಂತೆ ಚಿಕಿತ್ಸೆ ಮುಂದುವರಿಸಲು ಗುರುವಾರ ಮತ್ತೆ ಸಾಯಿರಾಧಾ ರೆಸಾರ್ಟ್‌ಗೆ ಆಗಮಿಸಿದ್ದಾರೆ.

Advertisement

ಪತ್ನಿ ಚೆನ್ನಮ್ಮರೊಂದಿಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ದೇವೇಗೌಡರು ಅಲ್ಲಿಂದ ಕಾರಿನ ಮೂಲಕ ಮೂಳೂರಿನ ಸಾಯಿರಾಧಾ ರೆಸಾರ್ಟ್‌ಗೆ ತೆರಳಿದರು.

ದೇವೇಗೌಡರು ಕಳೆದ ವಾರ ಪುತ್ರ, ಕುಮಾರಸ್ವಾಮಿ ಅವರೊಂದಿಗೆ ಆಗಮಿಸಿ ಡಾ| ತನ್ಮಯ್‌ ಗೋಸ್ವಾಮಿ ನೇತೃತ್ವದ ತಂಡದಿಂದ ಐದು ದಿನಗಳ ಪ್ರಕೃತಿ ಚಿಕಿತ್ಸೆ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next