Advertisement

ಹಳೇ ಆರೋಪಿಗಳ ಬಂಧನ 

01:00 AM Mar 06, 2019 | Team Udayavani |

ಮಂಗಳೂರು: ಹಲವು ವರ್ಷ ಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಬಂಧಿಸಿದ್ದಾರೆ. ಮೂಲ್ಕಿ ನಿವಾಸಿ ಕೆ.ಎ ಇಬ್ರಾಹಿಂ (62) ಹಾಗೂ ತಿರುವೈಲ್‌ ಗ್ರಾಮದ ಕೆತ್ತಿಕಲ್‌ ನಿವಾಸಿ ಹಬೀಬುಲ್ಲಾ (32) ಬಂಧಿತ ಆರೋಪಿಗಳು.  

Advertisement

ಕೆ.ಎ ಇಬ್ರಾಹಿಂ ಮೇಲೆ  ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 2002ರಲ್ಲಿ  ವಂಚನೆ ಪ್ರಕರಣ ದಾಖಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17  ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದ.  ಆರೋಪಿಯ ಪತ್ತೆಯ ನ್ಯಾಯಾಲಯವು ಈತನ ಮೇಲೆ  ವಾರಂಟು ಹೊರಡಿಸಿತ್ತು. ಈತ  ಮುಲ್ಕಿಗೆ ಬಂದ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹ ದಳದ  ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಬಂಧಿಸಿದರು. 

ಹಬೀಬುಲ್ಲಾ ಮೇಲೆ  ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ 2007ರಲ್ಲಿ  ದೊಂಬಿ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17  ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ಮೇಲೆ ವಾರಂಟ್‌ ಹೊರಡಿಸಲಾಗಿತ್ತು .ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ದೇಶದಂತೆ, ಡಿಸಿಪಿಗಳಾದ ಹನುಮಂತರಾಯ ಹಾಗೂ  ಉಮಾ ಪ್ರಶಾಂತ್‌  ಮಾರ್ಗದರ್ಶನದಲ್ಲಿ  ದಕ್ಷಿಣ  ರೌಡಿ ನಿಗ್ರಹ ದಳದ ಎ.ಸಿ.ಪಿ. ಮತ್ತು ಸಿಬಂದಿ   ಪತ್ತೆ ಕಾರ್ಯದಲ್ಲಿ  ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next