Advertisement

ಕಾನೂನಿನ ಅನ್ವಯವೇ ಕ್ರಮ; ಕಿರುಕುಳ ಕೊಟ್ಟಿರಲಿಲ್ಲ

12:44 AM Jul 31, 2019 | mahesh |

ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ವಿರುದ್ಧ ಕಾನೂನಿನ ಅನ್ವಯವೇ ಕ್ರಮ ಕೈಗೊಳ್ಳಲಾಗಿತ್ತು. ಅವರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಲಾಗಿರಲಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ನವದೆಹಲಿಯಲ್ಲಿ ಸ್ಪಷ್ಟಪಡಿಸಿದೆ. ಸಿದ್ಧಾರ್ಥ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕಿರುಕುಳ ಉಂಟಾಗುತ್ತಿತ್ತು ಎಂದು ಬರೆದಿದ್ದಾರೆ ಎಂದು ಹೇಳಲಾಗಿರುವ ಅಂಶದ ಬಗ್ಗೆ ಇಲಾಖೆ ಈ ಸ್ಪಷ್ಟೀಕರಣ ನೀಡಿದೆ. ಕೆಫೆ ಕಾಫಿ ಡೇ ಮಳಿಗೆಗಳ ಮೇಲೆ ಇಲಾಖೆ ದಾಳಿ ನಡೆಸಿದ್ದ ವೇಳೆ ಕಪ್ಪುಹಣ ಹೊಂದಿದ್ದ ಬಗ್ಗೆ ಸಿದ್ಧಾರ್ಥ್ ಅವರೇ ಸ್ವತಃ ಒಪ್ಪಿಕೊಂಡಿದ್ದರು ಎಂದು ಇಲಾಖೆ ಹೇಳಿಕೊಂಡಿದೆ.

Advertisement

ಮಾಹಿತಿ ತಂತ್ರಜ್ಞಾನ ಸಂಸ್ಥೆ ‘ಮೈಂಡ್‌ ಟ್ರೀ’ ಷೇರುಗಳ ಮಾರಾಟದಿಂದ 3,200 ಕೋಟಿ ರೂ. ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 46 ಕೋಟಿ ರೂ. ಮಾತ್ರ ತೆರಿಗೆ ಪಾವತಿ ಮಾಡಿದ್ದರು. ಕರ್ನಾಟಕದಲ್ಲಿನ ಪ್ರಭಾವಿ ರಾಜಕಾರಣಿಗಳ ಮೇಲೆ ದಾಳಿ ನಡೆಸಿದ ರೀತಿಯಲ್ಲಿಯೇ ಸಿದ್ಧಾರ್ಥ ಮೇಲೂ ದಾಳಿ ನಡೆಸಲಾಗಿತ್ತು. ವಿಚಾರಣೆ ವೇಳೆ 362.11 ಕೋಟಿ ರೂ. ಮೊತ್ತಕ್ಕೆ ದಾಖಲೆ ಇರಲಿಲ್ಲ ಮತ್ತು 118.02 ಕೋಟಿ ರೂ. ಮೊತ್ತ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿ.ಗೆ ಸಂಬಂಧಿಸಿದ್ದು ಎಂದು ಒಪ್ಪಿಕೊಂಡಿದ್ದರು ಎಂದು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next