Advertisement

ಚುನಾವಣೆ ನಂತರ ಮೈತ್ರಿ ಸರ್ಕಾರ ಪತನ

01:36 PM Apr 12, 2019 | Team Udayavani |
ದೇವನಹಳ್ಳಿ: ಲೋಕಸಭಾ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನವಾಗಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ಭವಿಷ್ಯ ನುಡಿದರು.  ನಗರದ ಹಳೇ ಬಸ್‌ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್‌. ಬಚ್ಚೇಗೌಡರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ಮೋದಿಯಿಂದ ಉತ್ತಮ ಆಡಳಿತ: ಬಿಜೆಪಿಯ ನರೇಂದ್ರ ಮೋದಿ ಅವರನ್ನು ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿ
ಘಟಬಂಧನ್‌ ಮಾಡಿಕೊಂಡಿವೆ. ಅದರಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ 5 ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದಿವೆ. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ನಿದ್ದೆ, ಆಹಾರವನ್ನು ತೊರೆದು ದುಡಿಯುತ್ತಿರುವ ಪ್ರಧಾನಿಯನ್ನು ದೇಶ ಇದುವರಿಗೂ ಕಂಡಿಲ್ಲ. ಕಳೆದ ಬಾರಿ ನೀಡಿದ್ದ 550 ಭರವಸೆ
ಗಳಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಪ್ರಧಾನಿ ತಂದಿದ್ದಾರೆ ಎಂದರು.
ಅಭಿವೃದ್ಧಿಗೆ ಆದ್ಯತೆ ನೀಡಿ: ಬಲಿಜಿಗ ಸಮಾಜಕ್ಕೆ 2 ಬಿ ಇದ್ದ ಮೀಸಲಾತಿಯನ್ನು ಯಡಿಯೂರಪ್ಪ 3 ಎಬಿ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಒಲೆಗಳಲ್ಲಿ ಅಡುಗೆ ಮಾಡುತ್ತಿದ್ದರು.
ಅದರಿಂದ ಸುಮಾರು 200 ಜನರು ಸಾವನ್ನಪ್ಪುತ್ತಿದ್ದರು. ಮೋದಿಯವರ ಕೇಂದ್ರ ಸರ್ಕಾರ ಉಜ್ವಲ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಪ್ರತಿ ಮನೆಗೆ ಅಡುಗೆ ಅನಿಗಳ ಸಂಪರ್ಕ ಕಲ್ಪಿಸಿದರು. ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ವೆಚ್ಚ ಬರೆಸುವ ಆಯುಷ್‌ಮಾನ್‌ ಭಾರತ್‌ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿದರೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಬಚ್ಚೇಗೌಡರನ್ನು ಗೆಲ್ಲಿಸಿ: ಕೇಂದ್ರದಲ್ಲಿ ಶೇ.7.5, ರಾಜ್ಯದಲ್ಲಿ ಶೇ.3.5 ಇರುವ ಮೀಸಲಾತಿಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶೇ.7.5 ನೀಡಲಾಗು ವುದು. ಪ್ರತಿ ಯೊಬ್ಬರಿಗೂ ಅನುಕೂಲ ಕಲ್ಪಿಸುವ ಯೋಜನೆಗಳನ್ನು ಮೋದಿ ನೀಡಿದ್ದಾರೆ. ಚಿಕ್ಕ ಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡರನ್ನು ಗೆಲ್ಲಿಸಿ ಸಂಸದರನ್ನಾಗಿ ಮಾಡಬೇಕು. ಶೇ.100 ರಷ್ಟು ಅವರು ಗೆಲ್ಲುವುದರಲ್ಲಿ ಸಂಶಯವಿಲ್ಲ. ಮೋದಿ ಅವರ ಕೈಬಲಪಡಿಸಬೇಕು. ಕಳೆದ ಚುನಾವಣೆಯಲ್ಲಿ ಕೆಲವೇ ಅಂತರದಲ್ಲಿ ಬಚ್ಚೇಗೌಡ ಸೋತಿದ್ದಾರೆ. 5 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಭಾರತ ವಿಶ್ವ ಗುರು ಆಗುತ್ತೆ: ದೇಶದಲ್ಲಿ 9.5 ಕೊಟಿ ಹೊಸ ಮತದಾರರಿದ್ದು, ಯುವಕರು ಮೋದಿ ಅವರನ್ನು ಬೆಂಬಲಿಸಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ 24 ಸ್ಥಾನ ಗೆಲ್ಲುತ್ತದೆ. ದೇಶದಲ್ಲಿ 300 ಹೆಚ್ಚಿನ ಸ್ಥಾನಗಳನ್ನು ಪಡೆ
ಯುವುದರ ಮೂಲಕ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಭಾರತ ವಿಶ್ವ ಗುರು ವಾಗಲು ಮತ್ತೂಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರವನ್ನು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ತರಬೇಕು. 5 ವರ್ಷದ ಅಧಿಕಾರವಧಿಯಲ್ಲಿ ಮೋದಿ ಅವರು ದೇಶದ ಸಮಗ್ರ ಅಭಿ ವೃದ್ಧಿಗಾಗಿ ತಮ್ಮನ್ನೇ ಅರ್ಪಣೆ ಮಾಡಿಕೊಂಡಿದ್ದಾರೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಜನರು ನಮ್ಮ ದೇಶವನ್ನು ನೋಡುತ್ತಿದ್ದಾರೆ ಎಂದರು.
 ರಾಜ್ಯ ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ನಿಂಬೆ ಹಣ್ಣಿನ ಮಂತ್ರಿ ಒಬ್ಬರಿದ್ದಾರೆ. ಅವರು ಮೋದಿ ಪ್ರಧಾನಿಯಾಗದೆ ನಿವೃತ್ತಿ ಆಗು ತ್ತಾರೆಂದು ಹೇಳುತ್ತಿದ್ದಾರೆ. ಬಾಯಿ ಮಾತಿಗೆ ಹೇಳಿದರೆ ಆಗದು. ಪಾಕಿಸ್ತಾನ ಪ್ರಧಾನಿ ಸಹ ಮೋದಿ ಅವರು ಪ್ರಧಾನಿಯಾದರೆ ಅನು ಕೂಲ ಎಂದು ಹೇಳಿದ್ದಾರೆ. ವೀರಪ್ಪ ಮೊಯ್ಲಿ ಬರಿ
ಸುಳ್ಳು ಹೇಳುವುದರಲ್ಲಿ ನಿಸ್ಸೀಮ ರಾಗಿದ್ದಾರೆ ಎಂದು ದೂರಿದರು.
ಮೊಯ್ಲಿ ಸಾಧನೆ ಶೂನ್ಯ: ಅಭ್ಯರ್ಥಿ ಬಿ.ಎನ್‌. ಬಚ್ಚೇಗೌಡ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಉತ್ತಮ ಕಾರ್ಯ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಶ್ರಮಿಸು ತ್ತಿರುವ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು. ಕಳೆದ 10 ವರ್ಷಗಳಿಂದ ಸಂಸದರಾಗಿ ವೀರಪ್ಪ ಮೊಯ್ಲಿ ಅವರ ಸಾಧನೆ ಶೂನ್ಯ ವಾಗಿದೆ. ಈ ಭಾಗಕ್ಕೆ
ಎತ್ತಿನಹೊಳೆ ಯೋಜನೆ ತರಲಾಗುವುದು ಎಂದು ಹೇಳುತ್ತಲೇ ಹೋಗುತ್ತಿದ್ದಾರೆ.
ಚುನಾವಣೆ ಬಂದಾಗ ಮಾತ್ರ ನೀರಿನ ವಿಚಾರ ನೆನಪಾಗುವುದು. ಕೃಷ್ಣಾ ಮತ್ತು ಮೇಕೆದಾಟುಗಳಿಂದ ನೀರು ಒದಗಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಸಿ.ಅಶ್ವತ್ಥನಾರಾಯಣ್‌, ಬಿ.ರಾಜಣ್ಣ, ಎಚ್‌.ಎಂ.ರವಿ ಕುಮಾರ್‌, ಚಕ್ರಪಾಣಿ, ಬಸವ ರಾಜು, ಎಸ್‌.ಜಿ.ನಾರಾಯಣ್‌ ಸ್ವಾಮಿ, ನಾರಾಯಣಸ್ವಾಮಿ ಹಾಗೂ ಇತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next