Advertisement

ಕಾಂಗ್ರೆಸ್‌ ನಾಯಕರ ಆರೋಪ ಸತ್ಯಕ್ಕೆ ದೂರ

06:30 AM Jun 03, 2018 | Team Udayavani |

ಶಿವಮೊಗ್ಗ: ಕಾಂಗ್ರೆಸ್‌ ಮುಖಂಡರಾದ ಡಿ.ಕೆ. ಶಿವಕುಮಾರ್‌, ಡಿ.ಕೆ. ಸುರೇಶ್‌ ಹಾಗೂ ಅವರ ಆಪ್ತರ ಮನೆ ಮೇಲೆ ಸಿಬಿಐ ಹಾಗೂ ಐಟಿ ದಾಳಿಗೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡಿದೆ ಎಂಬ ಕಾಂಗ್ರೆಸ್‌ ನಾಯಕರ ಆರೋಪ ಸತ್ಯಕ್ಕೆ ದೂರ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ರಾಜ್ಯದ ಹಲವು ಕಡೆ ಆದಾಯ ತೆರಿಗೆ ಹಾಗೂ ಸಿಬಿಐ ದಾಳಿ ನಡೆದಿದೆ.ಹಾಗಾದರೆ ಅಂದು ನಡೆದಿದ್ದು ಯುಪಿಎ ಸರ್ಕಾರದ ಪ್ರಚೋದಿತ ದಾಳಿಯಾಗಿತ್ತೇ ಎಂದು ಪ್ರಶ್ನಿಸಿದರು.

ಸಂತಸ ತಂದಿದೆ: ಉಡುಪಿ ಪೇಜಾವರ ಶ್ರೀಗಳು ತಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿರುವುದು ಸಂತಸ ತಂದಿದೆ.
ಶ್ರೀಗಳು ಮತ್ತು ತಮ್ಮ ಸಂಬಂಧ ಶ್ರೀಕೃಷ್ಣ ಮತ್ತು ಕನಕದಾಸರ ನಡುವಿನ ಸಂಬಂಧ ಇದ್ದಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next