Advertisement

ಶುಲ್ಕ ಮರುಪಾವತಿಸದಿದ್ರೆ ಕ್ರಮ

06:00 AM May 06, 2018 | Team Udayavani |

ಹೊಸದಿಲ್ಲಿ: ಪ್ರವೇಶ ಹಿಂಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡದ ಉನ್ನತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕೂಡಲೇ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

Advertisement

ಎಐಸಿಟಿಇ ಮತ್ತು ಯುಜಿಸಿ ನಿಯಮಗಳ ಪ್ರಕಾರ, ಯಾವುದೇ ವಿದ್ಯಾರ್ಥಿ ತನ್ನ ಪ್ರವೇಶದಿಂದ ಹಿಂದೆ ಸರಿದಾಗ, ಆ ವಿದ್ಯಾರ್ಥಿ ಪಾವತಿಸಿದ ಶುಲ್ಕ ಮತ್ತು ಮೂಲ ದಾಖಲೆಗಳನ್ನು ಶಿಕ್ಷಣ ಸಂಸ್ಥೆಯು ವಾಪಸ್‌ ಮಾಡಬೇಕು. ಆದರೆ, ಕೆಲವು ಸಂಸ್ಥೆಗಳು ಶುಲ್ಕ ಮರುಪಾವತಿ ಮಾಡುತ್ತಿಲ್ಲ. ಒಂದು ವೇಳೆ ಪಾವತಿ ಮಾಡಿದರೂ, ಆ ಮೊತ್ತದಲ್ಲಿ ಕಡಿತ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದ ತನ್ನಿಚ್ಛೆಯ ಸಂಸ್ಥೆಯಲ್ಲಿ ಓದಲು ವಿದ್ಯಾರ್ಥಿಗಳಿಗೆ ತೊಂದರೆಯಾ ಗುತ್ತಿದೆ. ಹೀಗಾಗಿ ಸೂಚನೆಗಳನ್ನು ಸಮರ್ಪಕ ವಾಗಿ ಜಾರಿಗೊಳಿಸದ ಡೀಮ್ಡ್ ವಿದ್ಯಾಲಯ ಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳ ವಿರುದ್ಧ ದಂಡನಾತ್ಮಕ ಕ್ರಮ ಜರುಗಿಸುವುದರ ಜೊತೆಗೆ ಅನುಮೋದನೆ ಮತ್ತು ಮಾನ್ಯತೆಯನ್ನೂ ರದ್ದು ಪಡಿಸುವಂತೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಯುಜಿಸಿಗೆ ಮಾನವ ಸಂಪನ್ಮೂಲ ಸಚಿವಾಲಯ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next