Advertisement

ಆರೋಪಿಗಳಿಬ್ಬರ ಖುಲಾಸೆ

06:45 AM Dec 16, 2018 | Team Udayavani |

ಲಾಹೋರ್‌: ಪಾಕಿಸ್ತಾನದ ಜೈಲಿನಲ್ಲಿ 2013ರಲ್ಲಿ ಭಾರತೀಯ ಸರಬ್ಜಿತ್‌ ಸಿಂಗ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಪಾಕ್‌ನ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ. 

Advertisement

ಸರಬ್ಜಿತ್‌ರನ್ನು ಇವರೇ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳ ಕೊರತೆಯಿರುವ ಕಾರಣ ಆರೋಪಿ ಗಳಿಬ್ಬರನ್ನು ಖುಲಾಸೆಗೊಳಿಸಿ ಕೋರ್ಟ್‌ ತೀರ್ಪು ನೀಡಿದೆ. ಘಟನೆ ನಡೆದ 5 ವರ್ಷಗಳ ಬಳಿಕ ಈ ತೀರ್ಪು ಬಂದಿದೆ. ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಅಮೀರ್‌ ಮತ್ತು ಮುದಸ್ಸರ್‌ ಎಂಬಿಬ್ಬರು ಗಲ್ಲುಶಿಕ್ಷೆಗೊಳಗಾದ ಅಪರಾಧಿಗಳು 2013ರಲ್ಲಿ ಸರಬ್ಜಿàತ್‌ ಸಿಂಗ್‌ ಮೇಲೆ ದಾಳಿ ನಡೆಸಿದ್ದರು. ತೀವ್ರ ಹಲ್ಲೆಯಿಂದ ಗಾಯಗೊಂಡಿದ್ದ ಸರಬ್ಜಿತ್‌ ಆಸ್ಪತ್ರೆಯಲ್ಲಿ ಅಸುನೀಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next