Advertisement

ತಲೆಮರೆಸಿದ್ದ ಆರೋಪಿ ಸೆರೆ

08:07 PM Mar 30, 2023 | Team Udayavani |

ಕುಂಬಳೆ: ಕಾಪ್ಪ ಪ್ರಕರಣದ ಆರೋಪಿಯನ್ನು ಗಡೀಪಾರು ಮಾಡಿಯೂ ಊರಲ್ಲಿ ಅಡಗುದಾಣದಲ್ಲಿ ಅವಿತಿದ್ದ ಆರೋಪಿಯನ್ನು ಸೆರೆ ಹಿಡಿದು ಪೊಲೀಸರು ಜೈಲಿನಲ್ಲಿ ಬಂಧನದಲ್ಲಿರಿಸಿದ್ದ ಆರೋಪಿಯಿಂದ ಮೊಬೈಲ್‌ ಫೋನನ್ನು ಪತ್ತೆ ಹಚ್ಚಲಾಗಿದೆ.ಚೆಮ್ಮಟ್ಟ ಬಯಲು ಜಿಲ್ಲಾ ಜೈಲಿನಲ್ಲಿ ಕಾಪ್ಪ ಪ್ರಕರಣದಲ್ಲಿ ಬಂಧನದಲ್ಲಿದ್ದ ತ್ರಿಕ್ಕರಪ್ಪುರದ ಮಹ್ಮದ್‌ ಸುಹೈಲಿ (24)ಎಂಬಾತನನ್ನು ಕಣ್ಣೂರು ಸೆಂಟ್ರಲ್‌ ಜೈಲಿಗೆ ವರ್ಗಾಯಿಸಲು ಪೊಲೀಸ್‌ ಬೆಂಗಾವಲಲ್ಲಿ ಕರೆದೊಯ್ಯುತ್ತಿದ್ದಾಗ ಈತ ತನ್ನ ಕೈ ಕಾಲಿಗೆ ಗಾಯಮಾಡಿದ್ದನು.

Advertisement

ಈತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಿ ಬಳಿಕ ಈತನನ್ನು ಪೊಲೀಸರು ಜೈಲಿಗೆ ಕರೆತರುವಾಗ ಈತ ಮೊಬೈಲನ್ನು ಬೂಟಿನ ಅಡಿಭಾಗದಲ್ಲಿ ರಿಸಿ ಜೈಲಿನೊಳಗೆ ತಂದಿದ್ದನು.ಇದನ್ನು ಗಮನಿಸಿದ ಜೈಲಿನ ಅಧೀಕ್ಷರು ಹೊಸದುರ್ಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.ಇದರಂತೆ ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ಈತ ಮೊಬೈಲನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟಿದ್ದನು.ತಪಾಸಣೆ ನಡೆಸಲು ಒಪ್ಪದಾಗ ಪೊಲೀಸರು ಬಲವಂತವಾಗಿ ತಪಾಸಣೆ ನಡೆಸಿ ಮೊಬೈಲನ್ನು ವಶಪಡಿಸಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next