Advertisement

ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

09:05 PM Jul 30, 2021 | Team Udayavani |

ಧಾರವಾಡ : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕಣ್ಣಿಗೆ ಕಾರದ ಪುಡಿ ಎರಚಿ ದುಷ್ಕರ್ಮಿಗಳು ಅಪಹರಣ ಪ್ರಕರಣ ಇಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

Advertisement

ಶ್ರೀನಿವಾಸ ನಾಯ್ಡು ಅಪಹರಣ ಕ್ಕೊಳಗಾಗಿ ಶುಕ್ರವಾರ ಮಧ್ಯಾನ್ಹದಿಂದ ನಾಪತ್ತೆಯಾಗಿದ್ದರು. ಕಾರ್ಯಾಚರಣೆ ಗೆ ಇಳಿದ ಧಾರವಾಡ ಪೊಲೀಸರು ಎಲ್ಲೆಡೆ ನಾಕಾಬಂದಿ ಮಾಡಿ ನಾಯ್ಡು ಪತ್ತೆಗೆ ವ್ಯುಹ ರಚಿಸಿದರು. ಪರಿಣಾಮ ಅಪಹರಣ ನಡೆದ ೪ ಗಂಟೆಯಲ್ಲಿ ಅವರನ್ನು ಪತ್ತೆ ಹಚ್ಚಿದ್ದಾರೆ.

ಅಪಹರಣಕ್ಕೆ ಕಾರಣ ?

ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಹೊಲ ನೋಡಲು ಹೊದಾಗ ಹಾಡು ಹಗಲೇ ದುಷ್ಕರ್ಮಿಗಳು ಉದ್ಯಮಿ ನಾಯ್ಡ ಅವರನ್ನು ಅಪಹರಿಸಿ ದೇವರ ಹುಬ್ಬಳ್ಳಿ ಗ್ರಾಮದ ಸಮೀಪದ ಶೆಡ್ ನಲ್ಲಿ ಕೂಡಿಡಲಾಗಿತ್ತು. ಸಂಜೆ ವೇಳೆಗೆ ನಾಯ್ಡು ಅವರನ್ನು ಸುರಕ್ಷಿತ ವಾಗಿ ಕರೆತಂದಿರುವ ವಿದ್ಯಾಗಿರಿ ಪೊಲೀಸ್ ರು ಪ್ರಕರಣದ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ಕಾರಣರಾದವರ ಬಂಧನಕ್ಕೆ ಪೊಲೀಸ್ ರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next