Advertisement

Train ಆ. 8ರ ವರೆಗೆ ಬೆಂಗಳೂರು- ಮಂಗಳೂರು ರೈಲು ಇಲ್ಲ

01:19 AM Aug 06, 2024 | Team Udayavani |

ಹಾಸನ/ ಸುಳ್ಯ: ಭೂ ಕುಸಿತದಿಂದ ಸ್ಥಗಿತಗೊಂಡಿರುವ ಬೆಂಗಳೂರು-ಮಂಗಳೂರು ನಡುವಣ ರೈಲು ಸಂಚಾರ ಆ. 8ರ ಬಳಿಕವೇ ಪುನರಾರಂಭವಾಗಲಿದೆ ಎಂದು ಮೈಸೂರು ರೈಲ್ವೇ ವಿಭಾಗ ತಿಳಿಸಿದೆ.

Advertisement

ಸಕಲೇಶಪುರ ತಾಲೂಕು ಎಡ ಕುಮೇರಿ ಮತ್ತು ಕಡಗರವಳ್ಳಿ ರೈಲು ನಿಲ್ದಾಣಗಳ ನಡುವೆ ರೈಲು ಹಳಿ ಪಕ್ಕ ಭೂ ಕುಸಿತ ಉಂಟಾಗಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ 12 ರೈಲುಗಳ ಸಂಚಾರವನ್ನು ಜು. 27ರಿಂದ ರದ್ದು ಪಡಿಸಲಾಗಿದ್ದು, ಆ. 8ರ ವರೆಗೆ ಮುಂದುವರಿಯ ಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಭೂ ಕುಸಿತದ ಸ್ಥಳದಲ್ಲಿ ರಕ್ಷಣೆಯ ತಡೆಗೋಡೆನಿರ್ಮಾಣದ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಹಳಿ ಸರಿಪಡಿಸುವ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಗೂಡ್ಸ್‌ ಎಂಜಿನ್‌ ಅನ್ನು ಪರೀಕ್ಷಾರ್ಥವಾಗಿ ಚಲಾಯಿಸ ಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಸುರಕ್ಷಾ ಕ್ರಮಗಳ ಪ್ರಕ್ರಿಯೆ ನಡೆಯಬೇಕಾಗಿದೆ. ಹಾಗಾಗಿ ಆ. 8ರ ವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next