Advertisement

ಫ್ರಾಂಕ್‌ ಫೆರ್ನಾಂಡಿಸ್‌ಗೆ ತು.ರ.ವೇ ಅಭಿನಂದನೆ

12:58 PM Nov 06, 2017 | Team Udayavani |

ಮಹಾನಗರ: ಡಿಸೆಂಬರ್‌ 23, 24ರಂದು ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುವ ತುಳುನಾಡೋಚ್ಚಯ 2017ರ ಅಧ್ಯಕ್ಷರಾದ ಡೇವಿಡ್‌ ಫ್ರಾಂಕ್‌ ಫೆರ್ನಾಂಡಿಸ್‌ ಅವರನ್ನು ತುಳುನಾಡ ರಕ್ಷಣಾ ವೇದಿಕೆಯಿಂದ ಅಭಿನಂದಿಸಲಾಯಿತು.

Advertisement

ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು ಮಾತನಾಡಿ, ತುಳುನಾಡಿನ ಮತೀಯ ಸಾಮರಸ್ಯ, ಏಕತೆ ಹಾಗೂ ಅಭಿವೃದ್ಧಿಯ ಪ್ರತೀಕವಾದ ತುಳುನಾಡೋಚ್ಚಯ ಕಾರ್ಯಕ್ರಮದ ಒಟ್ಟು ಅಧ್ಯಕ್ಷತೆಯನ್ನು ತುಳುನಾಡಿಗಾಗಿ ದುಡಿಯುತ್ತಿರುವ ಡೇವಿಡ್‌ ಫ್ರಾಂಕ್‌ ಫೆರ್ನಾಂಡಿಸ್‌ರವರಿಗೆ ಒಲಿದು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ
ಸಂಪೂರ್ಣ ಯಶಸ್ವಿಯಾಗುವ ಭರವಸೆ ಇದೆ ಎಂದರು.

ತುಳುನಾಡೋಚ್ಚಯ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್‌ ಶೆಟ್ಟಿ, ವಿಶ್ವ ತುಳುವೆರೆ ಆಯನೊದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಆಳ್ವ ಬದಿಯಡ್ಕ, ತು.ರ.ವೇ. ಕೇಂದ್ರೀಯ ಖಜಾಂಚಿ ಅಬ್ದುಲ್‌ ರಶೀದ್‌ ಜಪ್ಪು, ಸಂಘಟನ ಕಾರ್ಯದರ್ಶಿ ಆನಂದ್‌ ಅಮೀನ್‌ ಅಡ್ಯಾರ್‌, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿ ಜೈನ್‌, ತು.ರ.ವೇ. ಕಾಸರಗೋಡು ಘಟಕದ ಅಧ್ಯಕ್ಷರಾದ ಭಾಸ್ಕರ್‌ ರೈ ಕುಂಬ್ಲೆ, ತು.ರ.ವೇ. ಪ್ರಮುಖರಾದ ಶಿವ ಶೆಟ್ಟಿ, ಭೂಷನ್‌ ಕುಲಾಲ್‌, ರೇಷ್ಮಾ ಉಳ್ಳಾಲ, ಸುಖಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ತು.ರ.ವೇ. ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಭಟ್‌ ಕಡಬ ಸ್ವಾಗತಿಸಿದರು. ತು.ರ.ವೇ. ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿರಾಜ್‌ ಅಡ್ಕರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next