Advertisement

ಘನತೆ, ಸಭ್ಯತೆಯ ಹೋರಾಟಕ್ಕೆ ಥ್ಯಾಂಕ್ಸ್‌

06:00 AM Dec 19, 2017 | Team Udayavani |

ನವದೆಹಲಿ: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣಾ ಫ‌ಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಕಾರ್ಯಕರ್ತರಿಗೆ ಹುರಿದುಂಬಿಸಿ ಅವರಲ್ಲಿ ಹುಮ್ಮಸ್ಸು ತುಂಬಿಸಲು ಪ್ರಯತ್ನಿಸಿದ್ದಾರೆ. 
ಟ್ವಿಟರ್‌ನಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ, “”ನನ್ನ ಕಾಂಗ್ರೆಸ್‌ನ ಸಹೋದರ, ಸಹೋದರಿಯರೇ, ನೀವು ಯಾರ ವಿರುದ್ಧ ಸಮರ ಸಾರಿದೀರೋ ಅವರ ಕ್ರೋಧಾಗ್ನಿಯ ವಿರುದ್ಧ ಘನತೆಯೊಂದಿಗೆ ಹೋರಾಡಿದ್ದೀರಿ. ನಿಮ್ಮ ಈ ಹೋರಾಟ, ಕಾಂಗ್ರೆಸ್‌ನ ನೈಜ ಶಕ್ತಿಯಾದ ಸಭ್ಯತೆ ಹಾಗೂ ಧೈರ್ಯಗಳನ್ನು ಅಭಿವ್ಯಕ್ತಗೊಳಿಸಿದೆ” ಎಂದು ಹೇಳಿದ್ದಾರೆ. 

Advertisement

ತಮ್ಮ ಮತ್ತೂಂದು ಟ್ವೀಟ್‌ನಲ್ಲಿ, “”ಜನಾದೇಶ ವನ್ನು ಕಾಂಗ್ರೆಸ್‌ ಸ್ವಾಗತಿಸಲಿದೆ. ಎರಡೂ ರಾಜ್ಯಗಳಲ್ಲಿ ಸ್ಥಾಪನೆಯಾಗಲಿರುವ ಹೊಸ ಸರ್ಕಾರಗಳಿಗೆ ನನ್ನ ಅಭಿನಂದನೆಗಳು. ಎರಡೂ ರಾಜ್ಯಗಳ ಜನತೆ ನನಗೆ ತೋರಿಸಿದ ಪ್ರೀತಿ, ವಿಶ್ವಾಸಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ” ಎಂದಿದ್ದಾರೆ. 

ಇತ್ತೀಚೆಗೆ ನಡೆದಿದ್ದ ಹಿಮಾಚಲ ಪ್ರದೇಶ ಚುನಾವಣೆಗಳ ಫ‌ಲಿತಾಂಶ, ಸೋಮವಾರ ಬಹಿರಂಗಗೊಂಡಿದ್ದು ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಹಿಡಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next