Advertisement

ತ್ರಿವಳಿ ತಲಾಖ್‌ : ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ಪೊಲೀಸರು

07:34 PM Mar 08, 2023 | Team Udayavani |

ಮುಂಬೈ :ಮಹಾರಾಷ್ಟ್ರದ ಥಾಣೆಯಲ್ಲಿ ಪತ್ನಿಗೆ ತಲಾಖ್‌ ನೀಡಿದ ವ್ಯಕ್ತಿ ಹಾಗೂ ಆತನ ಭಾವಿ ಪತ್ನಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ದೇಶದಲ್ಲಿ ತ್ರಿವಳಿ ತಲಾಖ್‌ ನಿಷೇಧದ ಬಳಿಕವೂ, ಭಿವಾಂಡಿ ಪ್ರದೇಶದ ನಿವಾಸಿಯೊಬ್ಬ ತನ್ನ ಪತ್ನಿ ಜತೆಗಿನ ವೈಮನಸ್ಸಿನಿಂದಾಗಿ ಆಕೆಗೆ ಫೆ.26ರಂದು ತ್ರಿವಳಿ ತಲಾಖ್‌ ನೀಡಿದ್ದಾನೆ.

ಅಲ್ಲದೇ,ಆಕೆ ಬದುಕಿರುವಾಗಿಯೇ ಮತ್ತೊಬ್ಬಳನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದು, ವ್ಯಕ್ತಿ ಹಾಗೂ ಭಾವಿ ಪತ್ನಿ ಸೇರಿ ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ್ದಾರೆ.

ಮಹಿಳೆಯ ದೂರನ್ನು ಆಧರಿಸಿ, ಮುಸ್ಲಿಂ ಮಹಿಳೆಯರ ಮದುವೆ ಹಕ್ಕು ರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next