Advertisement

ತಲ್ಲೂರು : ಬಸ್‌- ಬೈಕ್‌ ಢಿಕ್ಕಿ ; ಸವಾರ ಸ್ಥಳದಲ್ಲೇ ಸಾವು

03:02 PM Jan 07, 2018 | Team Udayavani |

ಕುಂದಾಪುರ: ಖಾಸಗಿ ಬಸ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ  ಅಪಘಾತದಲ್ಲಿ  ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ನೇರಳಕಟ್ಟೆ ಗುಲ್ವಾಡಿಯ ಕೌಂಜೂರು ನಿವಾಸಿ ಲಕ್ಷ್ಮಣ್‌ ಆಚಾರ್‌ ಪುತ್ರ ರವೀಂದ್ರ ಆಚಾರ್‌ (36) ಮೃತಪಟ್ಟವರು.
ರವೀಂದ್ರ   ನೇರಳಕಟ್ಟೆಯಿಂದ ಕೆಲಸಕ್ಕೆ ತೆರಳುತ್ತಿರುವಾಗ ಕೆರಾಡಿಯಿಂದ ಹೆಮ್ಮಾಡಿ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದಿದೆ.
  
ಶ್ಲಾಘನೀಯ ಕಾರ್ಯ
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆಯ ಎಸ್‌ಐ ಸುಬ್ಬಣ್ಣ ಭೇಟಿ ನೀಡಿದ್ದು, ಹೆದ್ದಾರಿ ಬದಿ ಹೊಂಡ- ಗುಂಡಿಗಳನ್ನು ಕಂಡು ತತ್‌ಕ್ಷಣವೇ ಟಿಪ್ಪರ್‌ ಮೂಲಕ ಮಣ್ಣು ಹಾಕಿಸಿ ಮುಚ್ಚಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಮೆಗತಿ ಕಾಮಗಾರಿ ಕುಂದಾಪುರ ದಿಂದ ಬೈಂದೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಅಗಲಗೊಳಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಸವಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.  ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. 

ಹಟ್ಟಿಯಂಗಡಿ ಸಮೀಪ ಮರದ ಕೆತ್ತನೆಯ ಕೆಲಸ ನಿರ್ವಹಿಸುತ್ತಿದ್ದ ರವೀಂದ್ರ ಅವರಿಗೆ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಹಾಗೂ 9 ತಿಂಗಳ ಮಗುವನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next