Advertisement

ಭಾರತದಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೆ ಮಹತ್ವ ಸಿಗಬೇಕು: ಕುಂಬ್ಳೆ

10:07 AM Oct 11, 2019 | keerthan |

ಬೆಂಗಳೂರು: ಭಾರತ ತಂಡ ತವರಿನಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೇ ಮಹತ್ವ ಸಿಗಬೇಕು. ವಿದೇಶದಲ್ಲಿ ಟೆಸ್ಟ್ ಗೆದ್ದರೆ ಮಾತ್ರ ದೊಡ್ಡ ಗೆಲುವು ಎಂಬ ಪರಂಪರೆ ಕೊನೆಗೊಳ್ಳಬೇಕು ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಾಗ ನಾವು ಹಗುರವಾಗಿ ಪರಿಗಣಿಸುತ್ತೇವೆ. ಆದರೆ ವಿದೇಶದಲ್ಲಿ ಪಂದ್ಯ ಸೋತರೆ ಆ ಪಂದ್ಯಗಳನ್ನು ಗೆಲ್ಲಬೇಕಿತ್ತು ಎನ್ನುತ್ತಾರೆ. ಆದರೆ ಬೇರೆ ಯಾವುದೇ ಕ್ರೀಡೆಯನ್ನು ನೋಡಿ, ಎಲ್ಲಿ ಗೆದ್ದರು ಎನ್ನುವುದು ಮುಖ್ಯವಲ್ಲ ಅಲ್ಲಿ ಎಂದರು.

ಈ ಬಗ್ಗೆ ನಾವು ಗಮಹರಿಸಬೇಕಾಗಿದೆ. ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾದ ನಂತರ ಎಲ್ಲರೂ ತವರಿನ ಪಂದ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next