Advertisement

Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

09:50 PM Jul 24, 2024 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿರುವ ಉಗ್ರರನ್ನು ಜೈಲಿಗೆ ಕಳುಹಿಸುತ್ತೇವೆ ಇಲ್ಲವೇ ನರಕಕ್ಕೆ ಕಳುಹಿಸುತ್ತೇವೆ ಎಂದು ಕೇಂದ್ರ ಖಾತೆ ರಾಜ್ಯ ಗೃಹ ಸಚಿವ ನಿತ್ಯಾನಂದ ರಾಯ್‌ ಹೇಳಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಸಂಸದ ಪ್ರಮೋದ್‌ ತಿವಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ ಯಾವುದೇ ದಾಕ್ಷಿಣ್ಯವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಹೆಚ್ಚಾಗುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ಶೀಘ್ರವೇ ಕೊನೆಗಳಿಸುತ್ತೇವೆ ಎಂದಿದ್ದಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ 28 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಆ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗಳೂ ಹುತಾತ್ಮರಾಗಿದ್ದಾರೆ. 2019ರಲ್ಲಿ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ದೊರೆತ ಬಳಿಕ 900 ಉಗ್ರರನ್ನು ಕೊಲ್ಲಲಾಗಿದೆ ಎಂದರು.

ಇದನ್ನೂ ಓದಿ: Donald Trump: ಹತ್ಯೆಗೆ ಯತ್ನ ಹಿನ್ನೆಲೆ: ಇನ್ನು ಟ್ರಂಪ್‌ ಬಹಿರಂಗ ಚುನಾವಣಾ ಪ್ರಚಾರ ಇಲ್ಲ?

Advertisement

Udayavani is now on Telegram. Click here to join our channel and stay updated with the latest news.

Next