Advertisement

ಬೈಕ್‌ ಮೂಲಕ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರರ ಪ್ಲ್ಯಾನ್?

02:39 PM Apr 15, 2019 | Team Udayavani |

ಶ್ರೀನಗರ: ಪುಲ್ವಾಮ ಮಾದರಿಯ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರ ಸಂಘಟನೆಗಳು ಸಿದ್ಧವಾಗಿವೆಯೇ? ಗುಪ್ತಚರ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇಂತಹದ್ದೊಂದು ದಾಳಿಗಳಾಗುವ ಸಾಧ್ಯತೆಗಳಿವೆ ಮತ್ತು ಈ ಬಾರಿ ಬೈಕನ್ನು ಬಳಸಿಕೊಂಡು ದಾಳಿಯನ್ನು ನಡೆಸಲು ಉಗ್ರಸಂಘಟನೆಗಳು ಯೋಜನೆ ಹಾಕಿಕೊಂಡಿವೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಗುಪ್ತಚರ ಮಾಹಿತಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಮೇರೆಗೆ ಖಾಸಗಿ ಸುದ್ದಿವಾಹಿನಿಯೊಂದು ಈ ವಿವರವನ್ನು ಬಹಿರಂಗಗೊಳಿಸಿದೆ.

Advertisement

ಗುಪ್ತಚರ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ, ಉಗ್ರರು ರಿಮೋಟ್‌ ಕಂಟ್ರೋಲ್‌ ಬಳಸಿ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪೋಟವೊಂದನ್ನು ನಡೆಸಲು ಸಂಚು ನಡೆಸಿರುವುದು ಗೊತ್ತಾಗಿದೆ. ಈ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಭದ್ರತಾ ಪಡೆಗಳು ಹೆದ್ದಾರಿಯುದ್ದಕ್ಕೂ ಭದ್ರತೆಯನ್ನು ಬಿಗಿಗೊಳಿಸಿವೆ ಮತ್ತು ಎಲ್ಲಾ ಭದ್ರತಾ ಪಡೆಗಳ ಜವಾನರನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಕರೆದೊಯ್ಯುವ ಸೇನಾ ವಾಹನಗಳು ಬೆಳಿಗ್ಗೆ 9 ಗಂಟೆಯ ಬಳಿಕವಷ್ಟೇ ಪ್ರಯಾಣಿಸಬೇಕೆಂದು ಆದೇಶಹೊರಡಿಸಿವೆ.

ಜಮ್ಮು ಕಾಶ್ಮೀರದ ಭಯೋತ್ಪಾದನಾ ನಿಗ್ರಹ ವಿಭಾಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನಿಖಾ ಮತ್ತು ಭದ್ರತಾ ದಳವು ಈ ಕುರಿತಾಗಿ ವರದಿಯೊಂದನ್ನು ಸಿದ್ಧಪಡಿಸಿದೆ. ಮತ್ತು ತನ್ನ ಆ ವರದಿಯಲ್ಲಿ ಅದು ಬಹಿರಂಗಗೊಳಿಸಿರುವ ಮಾಹಿತಿಗಳ ಪ್ರಕಾರ, ವಾಹನಗಳಲ್ಲಿರುವ ಕಳವು ನಿರೋಧಕ ಅಲಾರಾಂ ವ್ಯವಸ್ಥೆ ಅಥವಾ ಕೀಗಳು ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ಸುಧಾರಿತ ನ್ಪೋಟಕಗಳನ್ನು ನ್ಪೋಟಿಸಲು ಉತ್ತಮ ಸಾಧನವಾಗಿ ಮಾರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next