Advertisement

ಹತ್ಯೆಗೀಡಾದ ಉಗ್ರ ಶ್ರೀನಗರದಲ್ಲಿ ಆತ್ಮಾಹುತಿ ದಾಳಿಗೆ ಸಿದ್ದನಾಗಿದ್ದ!

01:06 PM Nov 12, 2021 | Team Udayavani |

ಶ್ರೀನಗರ : ಭದ್ರತಾ ಪಡೆಗಳು ಗುರುವಾರ ಬೆಮಿನಾದ ಹಮ್ ದನಿಯಾ ಪ್ರದೇಶದಲ್ಲಿ ಹತ್ಯೆಗೈದಿರುವ ಉಗ್ರ ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಹತ್ಯೆಗೀಡಾದ ಉಗ್ರ ನಿಷೇಧಿತ ಭಯೋತ್ಪಾದಕ ಸಂಘಟನೆ ಮುಜಾಹಿದ್ದೀನ್ ಗಜ್ವತುಲ್ ಹಿಂದ್ ನ ಸದಸ್ಯನಾಗಿದ್ದು, ಖ್ರೂವ್ ಪ್ರದೇಶದ ಅಮೀರ್ ರಿಯಾಜ್ ಎನ್ನುವವನಾಗಿದ್ದು, 2019 ರಲ್ಲಿ 40 ಸಿಆರ್ ಪಿಎಫ್ ಯೋಧರ ಹತ್ಯೆಗೆ ಕಾರಣವಾಗಿದ್ದ ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಉಗ್ರನ ಸಂಬಂಧಿಕ ಎಂದು ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ವಿಜಯ್ ಕುಮಾರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕುಲ್ಗಾಮ್ ನಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಸಹಿತ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಹತ್ಯೆಗೀಡಾದ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಜಿಲ್ಲಾ ಕಮಾಂಡರ್ ಯವರ್ ಭಟ್‌ ಮತ್ತು ಶಿರಾಜ್ ಮೊಲ್ವಿ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾಜ್ ರಾಜ್ 2016 ರಿಂದ ಸಕ್ರಿಯನಾಗಿದ್ದು, ಯುವಕರನ್ನುಉಗ್ರ ಸಂಘಟನೆಗೆ ಸೇರಿಸುವಲ್ಲಿ ತೊಡಗಿಸಿಕೊಂಡಿದ್ದ ಮತ್ತು ಅವರು ಹಲವಾರು ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಆತನ ಹತ್ಯೆಯಿಂದ ದೊಡ್ಡ ಯಶಸ್ಸು ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next