Advertisement

ಶ್ರೀಲಂಕಾದಲ್ಲಿ ಉಗ್ರರ ದಾಳಿ: ಸಂತಾಪ ಸಭೆ

08:32 PM Apr 27, 2019 | Sriram |

ಉಳ್ಳಾಲ: ಶ್ರೀಲಂಕಾದಲ್ಲಿ ಉಗ್ರರ ಹೀನಾಯ ಕೃತ್ಯವನ್ನು ಎಲ್ಲ ದೇಶಗಳು ಒಗ್ಗೂಡಿ ಖಂಡಿಸಬೇಕಿದೆ. ಮೃತರ ಕುಟುಂಬಗಳಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ. ಬಡ ಕುಟುಂಬದವರೂ ಸಾವನ್ನಪ್ಪಿರುವುದು ದುರಾದೃಷ್ಟಕರ ವಾ ಗಿದ್ದು, ಸರಕಾರ ಸಹಾಯಹಸ್ತವನ್ನು ನೀಡಬೇಕು ಎಂದು ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಈಶ್ವರ್‌ ಉಳ್ಳಾಲ್‌ ಅಭಿಪ್ರಾಯಪಟ್ಟರು.

Advertisement

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಚರ್ಚ್‌ ದಾಳಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ತೊಕ್ಕೊಟ್ಟು ಬಸ್‌ ನಿಲ್ದಾಣದಲ್ಲಿ ಜರಗಿದ ಬೃಹತ್‌ ಸಂತಾಪ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್‌.ಎಸ್‌. ಕರೀಂ ಮಾತನಾಡಿದರು.

ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ, ಪ್ರ. ಕಾರ್ಯದರ್ಶಿ ಬಾತಿಸ್‌, ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್‌ ಕುಂಪಲ, ನಗರಸಭೆ ಮಾಜಿ ಅಧ್ಯಕ್ಷರಾದ ಬಾಝಿಲ್‌ ಡಿ’ಸೋಜಾ, ಹುಸೈನ್‌ ಕುಂಞಿ ಮೋನು ಯು.ಎ. ಇಸ್ಮಾಯಿಲ್‌, ಶಶಿಕಲಾ, ವೀಣಾ ಡಿ’ಸೋಜಾ ಮತ್ತು ಅಜೀಜ್‌ ಮಾಡೂರು, ವಿಲ್ಮಾ, ಮನ್ಸೂರು, ಜಾನ್‌, ಕೋಟೆಕಾರು ಪ. ಪಂ. ಸದಸ್ಯ ಹಮೀದ್‌ ಹಸನ್‌ ಮಾಡೂರು, ಪುಷ್ಠಿ ಮಹ ಮ್ಮದ್‌, ಡೇನಿಸ್‌ ಡಿ’ಸೋಜಾ, ಕಾಂಗ್ರೆಸ್‌ ಜಿ.ಉ.ಪಿ.ಎಚ್‌. ಇಸ್ಮಾಯಿಲ್‌, ಝಕಾ ರಿ ಯಾ, ಅಹಮ್ಮದ್‌ ಅಜ್ಜಿನಡ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next