Advertisement

ಟೀಸರ್‌ನಲ್ಲಿ ‘ಟೆರರ್‌’ ಝಲಕ್‌

03:56 PM May 05, 2023 | Team Udayavani |

ನಟ ಆದಿತ್ಯ ಅಭಿನಯದ “ಟೆರರ್‌’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಮತ್ತೂಂದೆಡೆ ಆದಿತ್ಯ ಜನ್ಮದಿನದ ಪ್ರಯುಕ್ತ “ಟೆರರ್‌’ ಚಿತ್ರತಂಡ ಸಿನಿಮಾದ ಸ್ಪೆಷಲ್‌ ಟೀಸರ್‌ ಅನ್ನು ಬಿಡುಗಡೆಗೊಳಿಸಿದೆ. ನಿರ್ದೇಶಕ ಕಂ ನಿರ್ಮಾಪಕ ಆರ್‌. ಚಂದ್ರು “ಟೆರರ್‌’ ಸಿನಿಮಾದ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

ಇದೇ ವೇಳೆ ಮಾತನಾಡಿದ ಆರ್‌. ಚಂದ್ರು, “ನಟ ಆದಿತ್ಯ ಅವರನ್ನು ಮತ್ತೂಮ್ಮೆ ಮಾಸ್‌ ಲುಕ್‌ನಲ್ಲಿ ನೋಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. “ಟೆರರ್‌’ ಸಿನಿಮಾದ ಹೆಸರಿನಲ್ಲೇ ಒಂದು ಫೈಯರ್‌ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಶಾಟ್ಸ್‌ ಕೂಡ ಗಮನ ಸೆಳೆಯುವಂತಿದೆ. ಟೀಸರ್‌ನಲ್ಲಿಯೇ “ಟೆರರ್‌’ ದೊಡ್ಡ ಹಿಟ್‌ ಆಗುವ ಲಕ್ಷಣಗಳು ಕಾಣುತ್ತಿದೆ. ಸಿನಿಮಾ ಬಿಡುಗಡೆಯಾದ ಮೇಲೂ ದೊಡ್ಡ ಹಿಟ್‌ ಆಗಲಿ’ ಎಂದರು.

ನಟ ಆದಿತ್ಯ ಮಾತನಾಡಿ, “ಮೊದಲ ಸಿನಿಮಾದಿಂದಲೂ ಕನ್ನಡ ಪ್ರೇಕ್ಷಕರು ನನ್ನ ಸಿನಿಮಾಗಳನ್ನು ಬೆಂಬಲಿಸುತ್ತ ಬಂದಿದ್ದಾರೆ. ಅದೇ ಪ್ರೀತಿ, ಬೆಂಬಲ “ಟೆರರ್‌’ ಸಿನಿಮಾದ ಮೇಲೂ ಇರಲಿ. ನನ್ನ ಸಿನಿ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾವಾಗಲಿದೆ ಎಂಬ ವಿಶ್ವಾಸವಿದೆ. ಈಗಾಗಲೇ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡುತ್ತೇನೆ’ ಎಂದರು.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ರಂಜನ್‌, “ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಗುತ್ತಿದೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗುತ್ತಿದೆ’ ಎಂದರು.

“ಆರಂಭದಲ್ಲಿ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯ್ತು. ಆದಿತ್ಯ ಅವರೊಂದಿಗೆ ಸಿನಿಮಾ ಮಾಡಬೇಕೆಂಬ ಬಹಳ ವರ್ಷಗಳ ಯೋಜನೆ ಈಗ ಕೈಗೂಡಿದೆ. “ಎ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೂಂದು ನಿರೀಕ್ಷಿತ ಸಿನಿಮಾವನ್ನು ನಮ್ಮ ಬ್ಯಾನರ್‌ನಲ್ಲಿ ಮಾಡುತ್ತಿದ್ದೇವೆ’ ಎಂಬುದು “ಟೆರರ್‌’ ನಿರ್ಮಾಪಕ ಸಿಲ್ಕ್ ಮಂಜು ಮಾತು.

Advertisement

ನಟ ಶ್ರೀನಗರ ಕಿಟ್ಟಿ, ನಿರ್ಮಾಪಕರಾದ ದೇವೇಂದ್ರ ರೆಡ್ಡಿ, ಎಂ. ರಮೇಶ್‌ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ಟೆರರ್‌’ ಸಿನಿಮಾದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಸಿನಿಮಾದ ಬಗ್ಗೆ ಮಾತನಾಡಿದರು.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next