Advertisement

Terdal: ಗಾಳಿಯಲ್ಲಿ ಗುಂಡು ಹಾರಿಸಿದ ಯುವಕ; ಪ್ರಕರಣ ದಾಖಲು

08:24 PM Oct 26, 2023 | Team Udayavani |

ರಬಕವಿ-ಬನಹಟ್ಟಿ (ತೇರದಾಳ) : ನಾಡ ಹಬ್ಬ ದಸರಾ ಆಯುಧ ಪೂಜೆಯಂದು ಯುವಕನೊಬ್ಬ ತನ್ನ ಅಜ್ಜನ ಪಿಸ್ತೂನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಈ ಕುರಿತು ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭುವನ ಪ್ರಭಾಕರ ಅಪರಾಜ(20) ಗುಂಡು ಹಾರಿಸಿದ ಯುವಕ.

Advertisement

ಗೋಲಭಾವಿ ರಸ್ತೆಯಲ್ಲಿರುವ ಷಣ್ಮುಖ ಗಾಡದಿ ಎಂಬುವರು ಅ.24 ರಂದು ಆಯುಧ ಪೂಜೆಯಂದು ಲೈಸೆನ್ಸ್ ಹೊಂದಿದ ತಮ್ಮ ಬಂದೂಕನ್ನು ಪೂಜೆ ಮಾಡಿದ್ದಾರೆ. ಜಮಖಂಡಿಯಿಂದ ಪೂಜೆಗಾಗಿ ಆಗಮಿಸಿದ್ದ ಮೊಮ್ಮಗ ಭುವನ ಬಂದೂಕನ್ನು ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾನೆ. ಗುರುವಾರ ಬೆಳಗ್ಗೆಯಿಂದ ಪೊಲೀಸರು ಆರೋಪಿಯನ್ನು ಹಾಗೂ ಲೈಸೆನ್ಸ್ ಹೊಂದಿದ ಷಣ್ಮುಖ ಗಾಡದಿ ಅವರನ್ನು ತೋಟದಲ್ಲಿ ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next