ಅಲಹಾಬಾದ್ : ಉತ್ತರ ಪ್ರದೇಶದ ಅಲಹಾಬಾದ್ನ ಶಿವಕುಟಿ ಪ್ರದೇಶದಲ್ಲಿರುವ ಅಖೀಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಳೆದ ಶನಿವಾರ ಹತ್ಯೆಗೈಯಲ್ಪಟ್ಟ ದನದ ತಲೆಯೊಂದು ಕಾಣಿಸಿಕೊಂಡ ಘಟನೆಯನ್ನು ಅನುಸರಿಸಿ ತೀವ್ರ ಉದ್ವಿಗ್ನತೆ ತಲೆದೋರಿದೆ.
ದೇವಸ್ಥಾನದ ಆವರಣದೊಳಗೆ ದನದ ಕರುವಿನ ಕಡಿಯಲ್ಪಟ್ಟ ತಲೆ ಭಾಗವು ಕಂಡು ಬಂದುದನ್ನು ಅನುಸರಿಸಿ ದೇವಳದ ಅರ್ಚಕ ಅಖೀಲೇಶ್ ಪಾಂಡೆ ಅವರು ಒಡನೆಯೇ ಪೊಲೀಸರಿಗೆ ಮಾಹಿತಿ ನೀಡಿದರು.
ದೇವಸ್ಥಾನದ ಆವರಣದೊಳಗೆ ಕರುವಿನ ಕಡಿದ ತಲೆ ಕಂಡು ಬಂತೆನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಸ್ಥಾನದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಸೆರೆ ಹಿಡಿಯುವಂತೆ ಅವರು ಸರಕಾರವನ್ನು, ಪೊಲೀಸರನ್ನು ಆಗ್ರಹಿಸಿದರು.
ನಾಲ್ಕು ಪೊಲೀಸ್ ಠಾಣೆಗಳಿಂದ ಭರಪೂರ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪರಿಸ್ಥಿತಿ ಹದಗೆಡದಂತೆ ಎಚ್ಚರಿಕೆ ವಹಿಸಿ, ಘಟನೆಗೆ ಸಂಬಂಧಿಸಿದ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೆರೆ ಹಿಡಿಯಲಾಗುವುದೆಂಬ ಭರವಸೆ ನೀಡಿದರು.
ಮುನ್ನೆಚ್ಚರಿಕೆಯ ಕ್ರಮವಾಗಿ ದೇವಳಕ್ಕೆ ಸಮೀಪವೇ ಇರುವ ಶಾಲೆಯನ್ನು ಇಂದು ಸೋಮವಾರ ಮುಚ್ಚಲಾಯಿತು.