Advertisement

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

01:37 AM Apr 30, 2024 | Team Udayavani |

ಹೆಬ್ರಿ: ಬೇಳಂಜೆ ತೆಂಕೂಲ ಅರಣ್ಯ ವ್ಯಾಪ್ತಿಯಲ್ಲಿ ಆಲಮಡ್ಡಿ ಮರದಿಂದ ಮೇಣ ಸಂಗ್ರಹಿಸುತ್ತಿದ್ದ ಮಮ್ಮದ್‌ ಸಾಹೇಬ್‌ ಹಾಗೂ ಫಕೀರ ಸಾಹೇಬ್‌ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ಅವರು ಹಲವಾರು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಮೇಣ ಸಂಗ್ರಹಿಸಿದ್ದರು. ಇವರನ್ನು ಅರಣ್ಯ ಅಧಿಕಾರಿ ಗೌರವ್‌ ಎಸ್‌. ಎಂ. ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಪಾಲಕ ಮಲ್ಲಯ್ಯ, ಸಿಬಂದಿ ವರ್ಗದ ರಮೇಶ್‌ ಮತ್ತು ರಾಮಚಂದ್ರ ಅವರ ತಂಡ ಬಂಧಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next