Advertisement
ಕಳೆದ ಮಳೆಗಾಲದಲ್ಲಿ ಈ ರಸ್ತೆಯ ಮಣ್ಣು ಕುಸಿದ ಕಾರಣ ಅಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ಅಪಾಯದ ಬಗ್ಗೆ ಅರಿವು ನೀಡಲಾಗಿತ್ತು. ಅ ಬಳಿಕ ಕಲ್ಲುಗಳನ್ನು ಇಡಲಾಗಿದೆ. ರಾತ್ರಿಯ ವೇಳೆ ಅಪಾಯ ಸೂಚಿಸುವ ಗುಂಟವನ್ನು ಹಾಕಲಾಗಿತ್ತು. ಇದು ನಡೆದು ಒಂದು ವರ್ಷ ಕಳೆದರೂ ಇಲಾಖೆ ರಸ್ತೆಯನ್ನು ದುರಸ್ತಿಪಡಿಸಿಲ್ಲ.
ಪೊಳಲಿ ದೇವಸ್ಥಾನ ಹಾಗೂ ಬಿ.ಸಿ. ರೋಡ್, ಬಂಟ್ವಾಳಕ್ಕೆ ಹೋಗುವ ಸಮೀಪದ ರಸ್ತೆ ಇದಾಗಿದೆ. ಬಿ.ಸಿ. ರೋಡ್- ಪೊಳಲಿ- ಕಟೀಲು- ಮೂಲ್ಕಿ ಹೆದ್ದಾರಿ ಪ್ರಸ್ತಾವನೆಯಲ್ಲಿರುವ ಈ ರಸ್ತೆ ಈಗ ವಾಹನಗಳಿಗೆ ಅಪಾಯ ತಂದೊಡ್ಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ರಸ್ತೆ ಸಂಪರ್ಕ ಕಡಿತವಾಗುವ ಸಂಭವವಿದೆ.
Related Articles
Advertisement