Advertisement

ಗಂಗಾವತಿ ಮತ್ತು ಶ್ರೀರಾಮನಗರ ಹತ್ತು ದಿನ ಲಾಕ್ ಡೌನ್ : ಬಿ ಸಿ ಪಾಟೀಲ್

03:16 PM Jul 20, 2020 | keerthan |

ಕೊಪ್ಪಳ: ಜಿಲ್ಲೆಯ ಗಂಗಾವತಿ ಹಾಗೂ ಶ್ರೀರಾಮ ನಗರವು ಕೋವಿಡ್ ಹಾಟ್ ಸ್ಪಾಟ್ ಆಗಿದ್ದು ನಾಳೆ ರಾತ್ರಿ 8 ರಿಂದ 10 ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಅದರಲ್ಲೂ ಗಂಗಾವತಿ ಹಾಗೂ ಶ್ರೀರಾಮನಗರ ಹಾಟ್ ಸ್ಪಾಟ್ ಆಗಿದೆ. ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಮಾಡಲಾಗುವುದು.

ಆದರೆ ಅಗತ್ಯ ಹಾಲು, ಕೃಷಿ ಕಾರ್ಯಕ್ಕೆ ಯಾವುದೇ ತೊಂದರೆ ಇಲ್ಲ. ಔಷಧಿ ಅಂಗಡಿಗಳು ಆರಂಭವಾಗಲಿವೆ. ಮದ್ಯದ ಅಂಗಡಿ ಬಂದ್ ಆಗಲಿವೆ. ಇನ್ನೂ ಬ್ಯಾಂಕ್ ಬಂದ್ ಕುರಿತಂತೆ ಜಿಲ್ಲಾಧಿಕಾರಿಯವರು ಚರ್ಚೆ ನಡೆಸಿ ಪ್ರಕಟಿಸಲಿದ್ದಾರೆ. ಮುಂದಿನ ದಿನದಿಂದ ಭಾಗ್ಯನಗರ  ಪ್ರದೇಶದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಡಿಸಿ ಕ್ರಮ ಕೈಗೊಳ್ಳಲಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧಡೆ ಚೆಕ್ ಪೋಸ್ಟ್ ಅಳವಡಿಸಲಾಗುವುದು  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next